ಬಳ್ಳಾರಿಯಲ್ಲಿ ರು.8 ಕೋಟಿ ಅಕ್ರಮ ಹಣ ವಶ

ಆಕ್ಸಸ್ ಸಂಸ್ಥೆಗೆ ಸೇರಿದ ಎನ್ನಲಾದ ಹಣವನ್ನು ಜಿ4ಎಸ್ ಸೆಕ್ಯುರಿಟಿ ವಾಹನದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ತರಲಾಗುತ್ತಿತ್ತು. ಗುರುವಾರ ಸಂಜೆ 6 ಗಂಟೆಯ ಸಮಯದಲ್ಲಿ ಬಳ್ಳಾರಿ ಬಳಿ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದಾಗ ರು.1000, 500, 100 ಮತ್ತು 20 ಮುಖಬೆಲೆಯ ರು.8 ಕೋಟಿ ಹಣ ಪತ್ತೆಯಾಯಿತು.
ಚಾಲಕ ಸರವಣ್ ಮತ್ತು ಇಬ್ಬರು ಭದ್ರತಾ ಸಿಬ್ಬಂದಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಈ ಸುದ್ದಿ ತಿಳಿಯುತ್ತಲೇ ಗ್ರಾಮೀಣ ಪೊಲೀಸ್ ಠಾಣೆಗೆ ಕೇಂದ್ರ ಚುನಾವಣಾ ಆಯೋಗದಿಂದ ನಿಯೋಜಿತರಾದ ವೀಕ್ಷಕ ರಿತೇಂದ್ರ ಶರ್ಮ, ಎಸ್ ಪಿ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಬಿ.ಶಿವಪ್ಪ ಮತ್ತಿತರು ಆಗಮಿಸಿ ಪರಿಶೀಲಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications