ಜೈಲಿನಲ್ಲಿ ವರುಣ್ ಗೆ ಚಿತ್ರಹಿಂಸೆ, ನಾಯ್ಡು ಆರೋಪ

ಇಟಾ ಜೈಲಿನಲ್ಲಿರುವ ವರುಣ್ ಗಾಂಧಿ ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರ ಅವರನ್ನು ನಡೆಸಿಕೊಳ್ಳುತ್ತಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ವರುಣ್ ಗಾಂಧಿ ಅವರನ್ನು ಚಿಕ್ಕದಾದ ಜೈಲಿನಲ್ಲಿ ಇರಿಸಲಾಗಿದೆ. ವರುಣ್ ಗಾಂಧಿಗೆ ಜೀವ ಬೆದರಿಕೆ ಇದ್ದರೂ ಕೂಡಾ ಸಮರ್ಪಕವಾದ ಸೌಲಭ್ಯ ನೀಡುವಲ್ಲಿ ಸರ್ಕಾರ ವಿಫಲವಾಗಿವೆ. ಮಾನವೀಯತೆಯಿಂದಲಾದರೂ ವರುಣ್ ಗಾಂಧಿ ಅವರಿಗೆ ಸೂಕ್ತ ಸೌಲಭ್ಯ ನೀಡಬೇಕಾಗಿತ್ತು. ಆದರೆ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಯಾವ ಕ್ರಮವನ್ನು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ರಚಿಸಿರುವ ವ್ಯವಸ್ಥಿತವಾದ ಷಡ್ಯಂತ್ರದಿಂದ ಇಂದು ವರುಣ್ ಗಾಂದಿ ಜೈಲಿನಲ್ಲಿ ಇರಬೇಕಾಗಿದೆ ಎಂದು ಅವರು ಕಿಡಿಕಾರಿದರು. ವರುಣ್ ಹೇಳಿಕೆಯನ್ನು ತಿರುಚಲಾಗಿದೆ. ಸಿಡಿಯಲ್ಲಿರುವ ಹೇಳಿಕೆಗಳು ವರುಣ್ ಗಾಂಧಿ ಸಂಬಂಧಿಸಿದ್ದಲ್ಲ. ವರುಣ್ ಮಾಡಿರುವ ಭಾಷಣದಲ್ಲಿ ಪ್ರಚೋದನಕಾರಿ ಹೇಳಿಕೆಗಳು ಇಲ್ಲವೇ ಇಲ್ಲ ಎಂದು ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ 2009 ತಾಜಾ ಸುದ್ದಿಗಳು












Click it and Unblock the Notifications