ವರುಣ್ ಗಾಂಧಿಯನ್ನು ಜೈಲಿಗೆ ಅಟ್ಟಿ, ಲಾಲು

ಆತನನ್ನು ಶಿಕ್ಷಿಸುವುದು ನನ್ನ ಅಧಿಕಾರ ವ್ಯಾಪ್ತಿಯೊಳಗೆ ಬರುತ್ತಿದ್ದರೆ ವರುಣ್ ಮತ್ತು ಅವರನ್ನು ಸಮರ್ಥಿಸುವ ನಾಯಕರು ಇಷ್ಟೊತ್ತಿಗೆ ಜೈಲಿನ ಕಂಬಿ ಎಣಿಸಬೇಕಾಗಿತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಗಾಂಧಿ ಬರೀ ತೋರಿಕೆಯ ಅಪರಾಧಿಯಾಗಿದ್ದು. ಇದರ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಅವರು ಆರೋಪಿಸಿದರು. ಶಿವಸೇನಾ ಮುಖಂಡ ಬಾಳಾ ಠಾಕ್ರೆ ಅವರು ವರುಣ್ ಗಾಂಧಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ.
ದೇಶದಲ್ಲಿ ಏಕತೆ ಮತ್ತು ಸಮಗ್ರತೆ ಕಾಪಾಡುಬೇಕೆಂದರೆ ವರುಣ್ ಗಾಂಧಿ ಶಿಕ್ಷೆ ನೀಡಲೇ ಬೇಕು. ವರುಣ್ ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಆರ್ಎಸ್ ಎಸ್ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿ ಎಂದು ಲಾಲು ತಾಕೀತು ಮಾಡಿದರು. ಬಿಜೆಪಿಯಲ್ಲಿ ವರುಣ್ ಗಾಂಧಿ ಹೇಳಿಕೆ ದ್ವಂದ್ವ ಹೇಳಿಕೆಗೆಳು ಬಂದಿವೆ. ಬಿಜೆಪಿ ವಕ್ತಾರ ವರುಣ್ ಗಾಂಧಿ ಹೇಳಿಕೆಗೆ ಬೆಂಬಲವಿಲ್ಲ ಎಂದಿದ್ದರೆ, ಇನ್ನೊಬ್ಬ ನಾಯಕ ವೆಂಕಯ್ಯ ನಾಯ್ಡು ಅದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ವರುಣ್ ಸ್ಪರ್ಧಿಸುವಂತಿಲ್ಲ ಆಯೋಗ












Click it and Unblock the Notifications