ಭವಾನಿ ರೇವಣ್ಣ ಮೈಸೂರಿನಿಂದ ಸ್ಪರ್ಧೆ ?
ಬೆಂಗಳೂರು, ಮಾ. 20 : ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಜೆಡಿಎಸ್ ಗೆಲ್ಲುವ ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ನಟ ಅಂಬರೀಷ್ ಗಾಳ ಹಾಕಿರುವ ಬೆನ್ನಲ್ಲೇ ಇನ್ನೊಂದು ಮಹತ್ವ ಸುದ್ದಿಯೊಂದು ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಬಹುದಿನಗಳಿಂದ ರಾಜಕೀಯ ಅಖಾಡಕ್ಕೆ ಇಳಿಯಲು ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಗೌಡರ ಇನ್ನೊಬ್ಬ ಸೊಸೆ ಭವಾನಿ ರೇವಣ್ಣ ಅವರು ಮೈಸೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ.
ಗೌಡರ ಕುಟುಂಬಕ್ಕೆ ಪ್ರತಿಷ್ಠೆಯ ಕ್ಷೇತ್ರಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ ತಮ್ಮ ಶತ್ರುಗಳನ್ನು ಮಣಿಸುವ ಜೊತೆಗೆ ಭವಿಷ್ಯದ ರಾಜಕೀಯ ಛಾವು ಒತ್ತುವ ಬಯಕೆ. ಮೈಸೂರಿನಲ್ಲಿ ಗೌಡರಿಗೆ ಇಬ್ಬರು ಶತ್ರುಗಳಿದ್ದಾರೆ. ಒಂದು ಬಿಜೆಪಿ, ಇನ್ನೊಂದು ಸಿದ್ದರಾಮಯ್ಯ, ಈ ಇಬ್ಬರೂ ಶತ್ರುಗಳನ್ನು ಸದೆಬಡಿಯುವುದು ಹೇಗೆಂಬ ಲೆಕ್ಕಾಚಾರದಲ್ಲಿ ಮುಳುಗಿರುವ ಗೌಡರು, ಸಮಯ ಬಂದರೆ ತಮ್ಮ ಸೊಸೆ ಭವಾನಿ ರೇವಣ್ಣ ಅವರನ್ನು ಹುರಿಯಾಳುಯಾಗಿಸಲು ಸಿದ್ಥತೆ ನಡೆಸಿದ್ದಾರೆ.
ಜೀವಿಜಯ ಅವರನ್ನು ಕಣಕ್ಕಿಳಿಸುವ ಚಿಂತನೆಯೂ ನಡೆದಿದೆ, ಇವೆಲ್ಲವೂ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದರ ಮೇಲೆ ನಿರ್ಧಾರವಾಗಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ರಾಜಕೀಯ ಕಡುವೈರಿಯಾಗಿ ರೂಪಿತವಾಗಿರುವ ಸಿ ಚೆನ್ನಿಗಪ್ಪ ಅವರನ್ನು ಮೂಲೆಗುಂಪು ಮಾಡಲು ಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಮಧುಗಿರಿ ಕ್ಷೇತ್ರದಿಂದ ಕಣಕ್ಕಿಳಿಸಿ ಗೆಲ್ಲಿಸಿರುವುದು ಗೌಡರ ಶಕ್ತಿಗೆ ಹಿಡಿದ ಕೈಗನ್ನಡಿ.
(ದಟ್ಸ್ ಕನ್ನಡ ವಾರ್ತೆ)
ಅಂಬರೀಷ್ ಜೆಡಿಎಸ್ ಸೇರ್ಪಡೆ ಸಾಧ್ಯತೆ












Click it and Unblock the Notifications