ದಲಿತ ಸಾಹಿತ್ಯಕ್ಕೆ ಲಕ್ಷರು ಬಸವರಾಜು ದತ್ತಿ
ಬೆಂಗಳೂರು ಮಾ.17: ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆದ 75 ನೇ ಅಖಿಲ ಭಾರತ ಅಮೃತೋತ್ಸವ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸಮ್ಮೇಳನಾಧ್ಯಕ್ಷರಾದ ಡಾ. ಎಲ್. ಬಸವರಾಜು ಅವರು ರು. 1 ಲಕ್ಷ ಮೊತ್ತದ "ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿನೆನಪಿನ ಎಲ್. ಬಸವರಾಜು ದತ್ತಿ" ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸುವಂತೆ ಸೂಚಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ: ನಲ್ಲೂರ್ ಪ್ರಸಾದ್ ಆರ್.ಕೆ. ಅವರು ಮಾರ್ಚ್ 14 ರಂದು ಮೈಸೂರಿನಲ್ಲಿ ಡಾ: ಎಲ್. ಬಸವರಾಜು ಅವರಿಂದ ಈ ದತ್ತಿನಿಧಿಯ ಚೆಕ್ನ್ನು ಸ್ವೀಕರಿಸಿದರು. ಪ್ರತಿ ವರ್ಷ ಪ್ರಕಟವಾದ ಉತ್ತಮ ದಲಿತ ಸಾಹಿತ್ಯ ಕೃತಿಗೆ ಕೆಲವು ಮಾರ್ಗಸೂಚಿಗಳನ್ವಯ ಬಹುಮಾನ ನೀಡುವಂತೆ ಅವರು ಸೂಚಿಸಿದ್ದಾರೆ. ಡಾ: ಎಲ್. ಬಸವರಾಜು ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಇದಕ್ಕಾಗಿ ಕೃತಜ್ಞತೆಗಳನ್ನು ಅರ್ಪಿಸಿದೆ.
(ದಟ್ಸ್ ಕನ್ನಡವಾರ್ತೆ)











Click it and Unblock the Notifications