ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಲಿತ ಸಾಹಿತ್ಯಕ್ಕೆ ಲಕ್ಷರು ಬಸವರಾಜು ದತ್ತಿ
ಬೆಂಗಳೂರು ಮಾ.17: ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆದ 75 ನೇ ಅಖಿಲ ಭಾರತ ಅಮೃತೋತ್ಸವ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸಮ್ಮೇಳನಾಧ್ಯಕ್ಷರಾದ ಡಾ. ಎಲ್. ಬಸವರಾಜು ಅವರು ರು. 1 ಲಕ್ಷ ಮೊತ್ತದ "ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿನೆನಪಿನ ಎಲ್. ಬಸವರಾಜು ದತ್ತಿ" ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸುವಂತೆ ಸೂಚಿಸಿದ್ದಾರೆ.
ಕನ್ನಡ
ಸಾಹಿತ್ಯ
ಪರಿಷತ್
ಅಧ್ಯಕ್ಷ
ಡಾ:
ನಲ್ಲೂರ್
ಪ್ರಸಾದ್
ಆರ್.ಕೆ.
ಅವರು
ಮಾರ್ಚ್
14
ರಂದು
ಮೈಸೂರಿನಲ್ಲಿ
ಡಾ:
ಎಲ್.
ಬಸವರಾಜು
ಅವರಿಂದ
ಈ
ದತ್ತಿನಿಧಿಯ
ಚೆಕ್ನ್ನು
ಸ್ವೀಕರಿಸಿದರು.
ಪ್ರತಿ
ವರ್ಷ
ಪ್ರಕಟವಾದ
ಉತ್ತಮ
ದಲಿತ
ಸಾಹಿತ್ಯ
ಕೃತಿಗೆ
ಕೆಲವು
ಮಾರ್ಗಸೂಚಿಗಳನ್ವಯ
ಬಹುಮಾನ
ನೀಡುವಂತೆ
ಅವರು
ಸೂಚಿಸಿದ್ದಾರೆ.
ಡಾ:
ಎಲ್.
ಬಸವರಾಜು
ಅವರಿಗೆ
ಕನ್ನಡ
ಸಾಹಿತ್ಯ
ಪರಿಷತ್
ಇದಕ್ಕಾಗಿ
ಕೃತಜ್ಞತೆಗಳನ್ನು
ಅರ್ಪಿಸಿದೆ.
(ದಟ್ಸ್
ಕನ್ನಡವಾರ್ತೆ)
Comments
ಎಲ್ ಬಸವರಾಜು ನಲ್ಲೂರು ಪ್ರಸಾದ್ ಸಾಹಿತ್ಯ ಸಮ್ಮೇಳನ kannada sahitya sammelana sahitya parishat ಚಿತ್ರದುರ್ಗ chitradurga
Story first published: Tuesday, March 17, 2009, 9:21 [IST]