ಹೋಳಿ ಹಬ್ಬಕ್ಕೆ ಎಸ್ಪಿಯಿಂದ 100 ರು, ಬಹುಮಾನ
ಲಖನೌ, ಮಾ. 12 : ಬುಧವಾರ ಹೋಳಿ ಹಬ್ಬದ ಆಚರಣೆ ಸಂಭ್ರಮದಲ್ಲಿ ಸ್ವತಃ ಸಮಾಜವಾದಿ ಪಕ್ಷ ಮುಖಂಡ ಮುಲಾಯಂ ಸಿಂಗ್ ಯಾದವ್ ನೆರೆದಿದ್ದ ಪ್ರತಿಯೊಬ್ಬರಿಗೂ 100 ರುಪಾಯಿಯನ್ನು ಹಂಚಿರುವುದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ನೋಟು ಹಂಚಿರುವ ಪ್ರಕರಣ ರಾಜಕೀಯ ಬಣ್ಣ ಬಳಿದುಕೊಳ್ಳತೊಡಗಿದೆ.
ಹೋಳಿ ಹಬ್ಬದ ಭರದಲ್ಲಿ ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದ ಮುಲಾಯಂ ಸಿಂಗ್, ಹಬ್ಬದ ದಿನದಂದು ನಿಮಗೆಲ್ಲರಿಗೂ ಬಹುಮಾನ ನೀಡುವೆ ಎಂದ ಪ್ರತಿಯೊಬ್ಬರಿಗೂ 100 ರುಪಾಯಿ ತೆಗೆದುಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸೇರಿದ್ದ ಎಲ್ಲರೂ ಸಮಾಜವಾದಿ ಪಕ್ಷದ ಕಾರ್ಯಕರ್ತರು ಎನ್ನಲಾಗಿದೆ. ಇದು ಉತ್ತರ ಪ್ರದೇಶದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ. ಎಸ್ಪಿ ಮುಖಂಡರ ಕ್ರಮ ಖಂಡಿಸಿ ಬಿಎಸ್ಪಿ ಸರ್ಕಾರ ಚುನಾವಣೆ ಆಯೋಗಕ್ಕೆ ದೂರು ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications