ವೆಲ್ಲಿಂಗ್ಟನ್, ಎರಡನೇ ಪಂದ್ಯ ಮಳೆಯಿಂದ ರದ್ದು
ವೆಲ್ಲಿಂಗ್ಟನ್, ಮಾ. 6 : ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಸರಣಿಯ ಎರಡನೇ ಏಕದಿನ ಕ್ರಿಕೆಟ್ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಟಾಸ್ ಗೆದ್ದು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ, ಮಳೆಯಿಂದ ಆಟ ನಿಂತಾಗ 28.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು. ಪದೇಪದೇ ಮಳೆಯ ತೊಂದರೆಯಿಂದಾಗಿ ಆಟವನ್ನು 34 ಓವರ್ ಗಳಿಗೆ ಮೊಟಕು ಗೊಳಿಸಲಾಗಿತ್ತು.
ಸೆಹ್ವಾಗ್ 54, ತೆಂಡೂಲ್ಕರ್ 61, ಗಂಭೀರ್ 30 ಮತ್ತು ಯುವರಾಜ್ ಸಿಂಗ್ ಸೊನ್ನೆ ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಆಟ ನಿಂತಾಗ ಧೋನಿ 23 ಮತ್ತು ರೈನಾ 13 ರನ್ ನಲ್ಲಿ ಬ್ಯಾಟ್ ಮಾಡುತ್ತಿದ್ದರು. ಸರಣಿಯ ಮುಂದಿನ ಪಂದ್ಯ ಭಾನುವಾರ ನಡೆಯಲಿದೆ.
(ದಟ್ಸ್ ಕನ್ನಡ ಕ್ರಿಕೆಟ್ ವಾರ್ತೆ)
ಕಿವಿ ಪ್ರಧಾನಿ ಜತೆ ಧೋನಿ ಪಡೆ ಔತಣಕೂಟ











Click it and Unblock the Notifications