ನಿಲ್ದಾಣ ನೋಡಲು ದೇವೇಗೌಡ ಬದುಕಿರಲಿ: ರೆಡ್ಡಿ
ಬಳ್ಳಾರಿ, ಫೆ. 24 : ಬಳ್ಳಾರಿ ವಿಮಾನ ನಿಲ್ದಾಣ ಕಾಮಗಾರಿ ವಿರೋಧಿಸಿ ಬುಧವಾರ (ಫೆ. 25) ಬಳ್ಳಾರಿ ಬಂದ್ ಆಚರಿಸಲಾಗುವುದು ಎಂದು ಬಳ್ಳಾರಿ ವಿಮಾನ ನಿಲ್ದಾಣ ವಿರೋಧಿ ವೇದಿಕೆ ತಿಳಿಸಿದೆ. ಯಾವುದೇ ಕಾರಣಕ್ಕೂ ನೀರಾವರಿ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ವೇದಿಕೆ ಸ್ಪಷ್ಟಪಡಿಸಿದೆ.
ದೇವೇಗೌಡರು ಬದುಕಿರಲಿ, ಜನಾರ್ದನರೆಡ್ಡಿ
ಬಳ್ಳಾರಿ ವಿಮಾನ ನಿಲ್ದಾಣ ಉದ್ಘಾಟನೆ ನೋಡಲು ದೇವೇಗೌಡ ಇನ್ನಷ್ಟು ಕಾಲ ಬದುಕಿರಬೇಕು. ದೇವರು ಅವರಿಗೆ ಇನ್ನಷ್ಟು ಆಯುಷ್ಯ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ವ್ಯಂಗ್ಯವಾಡಿದ್ದಾರೆ. ಪಾಪಿಗಳು ಯಾವಾಗಲೂ ಚಿರಾಯು, ಅವರು ಬದುಕಿದ್ದಷ್ಟು ನಮಗೆ ಕೆಲಸ ಮಾಡಲು ಹುಮ್ಮಸ್ಸು ಬರುತ್ತಿದೆ. ಬಳ್ಳಾರಿ ಮತ್ತು ಹಾಸನದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯನ್ನು ಕಾಣಲು ಕನಿಷ್ಠ ಮೂರು ವರ್ಷವಾದರೂ ದೇವೇಗೌಡ ಬದುಕಿರಬೇಕು ಎಂದರು.
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹಾಗೂ ಮಾಜಿ ಸಚಿವ ರೇವಣ್ಣ ಅವರನ್ನು ಏಕವಚನವದಲ್ಲಿ ಹಿಯಾಳಿಸಿರುವ ಜನಾರ್ದನರೆಡ್ಡಿ ಕ್ರಮವನ್ನು ಜೆಡಿಎಸ್ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದ್ದಾರೆ. ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications