ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ

ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಮಾಧ್ಯಮಗಳಿಂದ ಸಿಗುತ್ತಿರುವ ಕೊಡುಗೆ ಕುರಿತು ಚರ್ಚಿಸಲು 'ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ' ವಿಚಾರ ಸಂಕಿರಣವನ್ನು ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಲುಮ್ನಿ ಅಸೋಸಿಯೇಷನ್ ಜಂಟಿಯಾಗಿ ಏರ್ಪಡಿಸಿವೆ.
ದಿನಾಂಕ : ಫೆಬ್ರವರಿ 20ರಂದು ಶುಕ್ರವಾರ.
ಸ್ಥಳ : ಅಲುಮ್ನಿ ಅಸೋಸಿಯೇಷನ್ ಸಭಾಂಗಣ, ವೆಟರ್ನರಿ ಕಾಲೇಜಿನ ಪಕ್ಕ, ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು.
ಸಮಯ : ಬೆಳಿಗ್ಗೆ 10 ಗಂಟೆಗೆ.
ಕೃಷಿ ಸಚಿವರಾದ ಎಸ್.ಎ. ರವೀಂದ್ರನಾಥ್ ಅವರು ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಐಟಿಬಿಟಿ, ವಾರ್ತಾ, ಅಬಕಾರಿ ಮತ್ತು ಬೆಂಗಳೂರು ಜಲಮಂಡಳಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತರು ಮತ್ತು ಕೃಷಿ ನೀತಿ ವಿಶ್ಲೇಷಕರಾದ ದೇವೇಂದರ್ ಶರ್ಮಾ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಲಿದ್ದಾರೆ. ಬೀದರ್, ರಾಯಚೂರು, ಬಾಗಲಕೋಟೆ, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಹಿರಿಯ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಸಂಕಿಕರಣದಲ್ಲಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10ರಿಂದ ಸಾಯಂಕಾಲ 5ರವರೆಗೆ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಎರಡು ಪ್ರಮುಖ ಗೋಷ್ಠಿಗಳಲ್ಲಿ ಕೃಷಿ ಅಭಿವೃದ್ಧಿಗೆ ಮಾಧ್ಯಮಗಳ ಕೊಡುಗೆ, ಕೃಷಿಕರ ನಿರೀಕ್ಷೆ, ಕೃಷಿಕರಲ್ಲಿ ಅಂತರ್ಜಾಲದ ಬಳಕೆ ಮುಂತಾದ ವಿಷಯ ಕುರಿತಂತೆ ಅನೇಕ ಗಣ್ಯರು ವಿಚಾರ ಮಂಡಿಸಲಿದ್ದಾರೆ. ಗೋಷ್ಠಿಗಳ ವಿವರ ಕೆಳಗಿನಂತಿವೆ.
ಬೆಳಗಿನ ಗೋಷ್ಠಿ : ಸಮಯ : 11 ಗಂಟೆಗೆ, ಅಧ್ಯಕ್ಷತೆ : ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕ
ಮಾತನಾಡುವವರು
1) ಡಾ.ಆರ್. ದ್ವಾರಕೀನಾಥ್ : ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ - ಒಂದು ಸಿಂಹಾವಲೋಕನ.
2) ಜಿ.ಆರ್. ಗುಂಡಪ್ಪ : ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದ ಅನುಭವಗಳು.
3) ಸಿ.ಯು. ಬೆಳ್ಳಕ್ಕಿ : ಕೃಷಿಕರ ಮುನ್ನಡೆಗೆ ಬಾನುಲಿ ಕೊಡುಗೆ.
4) ನಾಗೇಶ ಹೆಗಡೆ : ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ.
5) ಎ.ಎಸ್. ಚಂದ್ರಮೌಳಿ : ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮಗಳಿಗೆ ಕೃಷಿ ಶ್ರೋತೃಗಳ/ವೀಕ್ಷಕರ ಸ್ಪಂದನ.
ಮಧ್ಯಾಹ್ನದ ಗೋಷ್ಠಿ : ಸಮಯ : 2.30 ಗಂಟೆಗೆ, ಅಧ್ಯಕ್ಷತೆ : ಈಶ್ವರ ದೈತೋಟ, ಪತ್ರಕರ್ತ
ವಿಚಾರ ಮಂಡಿಸುವವರು
1) ಸುನಂದಾ ಜಯರಾಮ್ : ಮಾಧ್ಯಮಗಳಿಂದ ಕೃಷಿಕರ ನಿರೀಕ್ಷೆ.
2) ಟಿ.ಎನ್. ಪ್ರಕಾಶ್ ಕಮ್ಮರಡಿ : ಕೃಷಿ ವಿಸ್ತರಣೆ ಚಟುವಟಿಕೆಗಳು ಮತ್ತು ಮಾಧ್ಯಮ.
3) ಆರ್.ಎನ್. ಶ್ರೀನಿವಾಸ ಗೌಡ : ಮಾಧ್ಯಮಗಳಿಂದ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ನಿರೀಕ್ಷೆ.
4) ಪಿ. ಪ್ರಶಾಂತ್ : ಕೃಷಿಕರಲ್ಲಿ ಅಂತರ್ಜಾಲ ಮತ್ತಿತರ ನೂತನ ಮಾಧ್ಯಮಗಳ ಬಳಕೆಯ ಸಾಧ್ಯತೆಗಳು.
5) ಪಿ.ವಿ. ಸತೀಶ್ : ಕೃಷಿಕರು ಮತ್ತು ಸಮುದಾಯ ಮಾಧ್ಯಮ.
6) ಅನಿತಾ ಪೈಲೂರು : ಕೃಷಿ ಬರಹಗಾರರು ಎದುರಿಸುತ್ತಿರುವ ಸವಾಲುಗಳು.
ಅಲುಮ್ನಿ ಅಸೋಸಿಯೇಷನ್ ನ ಅಧ್ಯಕ್ಷರಾದ ಜಿಕೆ ವೀರೇಶ್ ಮತ್ತು ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್ಆರ್ ವಿಶುಕುಮಾರ್ ಅವರು ಸರ್ವರಿಗೂ ಸ್ವಾಗತ ಕೋರಿದ್ದಾರೆ.
(ದಟ್ಸ್ ಕನ್ನಡ ಸಭೆ ಸಮಾರಂಭ)
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications