ಮೈಸೂರಿನಲ್ಲಿ ಭಾರತೀಯ ಸಂಗೀತ ಉತ್ಸವ

ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಸಂಸ್ಕಾರ ಭಾರತಿ ಮೈಸೂರು ನಗರದಲ್ಲಿ 2009ನೇ ಫೆಬ್ರವರಿ 19ರಿಂದ 22 ರವರೆಗೆ ರಾಷ್ಟ್ರೀಯ ಸಂಗೀತ ಉತ್ಸವ ಏರ್ಪಾಡಾಗಿದೆ. ಉತ್ತರಾದಿ ಹಾಗೂ ದಕ್ಷಿಣಾದಿ ಸಂಗೀತ ಪ್ರಾಕಾರಗಳ ಹಿರಿಯ ಹಾಗೂ ಕಿರಿಯ ಸಂಗೀತ ವಿದ್ವಾಂಸರು, ಸಾಧಕರು, ವಿಮರ್ಷಕರು, ಹಾಗೂ ಉದಯೋನ್ಮುಖ ವಿದ್ಯಾರ್ಥಿಗಳು ಭಾಗವಹಿಸುವ ಈ ಕಲಾಸಾಧಕ ಸಂಗಮ ಸಂಗೀತ ಉತ್ಸವ ನಮ್ಮ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಹಾಗು ಪಾರಂಪರಿಕ ನಗರವೆಂದು ಪ್ರಸಿದ್ದವಾದ ನಮ್ಮ ಮೈಸೂರಿನಲ್ಲಿ ಏರ್ಪಟ್ಟಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ.
ಈ ರಾಷ್ಟ್ರೀಯ ಸಂಗಿತೋತ್ಸವದಲ್ಲಿ ಹಿರಿಯ ಸಂಗೀತ ಗುರುಗಳಿಗೆ, ಸಾಧಕರಿಗೆ, ಪೋಷಕರಿಗೆ ಮತ್ತು ಹಿರಿಯ ವಾದ್ಯಗಳ ತಯಾರಕರಿಗೆ ಸನ್ಮಾನ, ದೇಶದ ಮಹಾನ್ ಸಂಗಿತ ವಿದ್ವಾಂಸರಿಂದ ಮೂರೂದಿವಸ ಸಂಜೆ ಪ್ರಧಾನ ಸಂಗೀತ ಕಛೇರಿ, ಗುರು ಶಿಷ್ಯ ಸಂವಾದ, ಸಂಗೀತವೇ ಕೇಂದ್ರವಾಗಿರುವ ವಿಷಯಗಳ ಮೇಲೆ ಉಪನ್ಯಾಸಗಳು, ವಿಶೇಷವಾಗಿ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳವರಿಂದ ನಾದ ಸುಧೆ ಹಾಗೂ ಎಲ್ಲಾ ಸಂಗೀತ ವಿದ್ವಾಂಸರು ಮತ್ತು ಸಂಗೀತ ವಿದ್ಯಾರ್ಥಿಗಳಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ಅಲ್ಲದೆ ವಿಶೇಷವಾಗಿ ಸಂಗೀತ ಯಜ್ಞ ಈ ಎಲ್ಲಾ ಕಾರ್ಯಕ್ರಮಗಳು ಈ ನಾಲ್ಕು ದಿವಸಗಳಲ್ಲಿ ಪ್ರಸ್ತುತಗೊಳ್ಳಲು ತಯಾರಿ ನಡೆದಿದೆ.
ಕಾರ್ಯಕ್ರಮದ ಸಂಪೂರ್ಣ ವಿವರ ಇಂತಿದೆ:
ಉದ್ಘಾಟನೆ : ದಿನಾಂಕ 19.02.09 ಸಂಜೆ 5 ಘಂಟೆಗೆ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಪೂಜ್ಯ ಶ್ರೀ ದತ್ತ ವಿಜಯಾನಂದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಪದ್ಮವಿಭೂಷಣ ಡಾ.ಎಂ ಬಾಲಮುರಳಿ ಕೃಷ್ಣರವರು ಉದ್ಘಾಟಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡ್ಯೂರಪ್ಪನವರು ಮತ್ತು ರಾಷ್ಟೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹರಾದ ಮೋಹನಜೀ ಭಾಗವತ್ ರವರು ಸಮಾರಂಭದ ಮುಖ್ಯ ಅತಿಥಿಗಳಾಗಿರುತ್ತಾರೆ. ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಕುಂಬ್ಳೆ ಸುಂದರ ರಾಯರು ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸುತ್ತಾರೆ.
ಸನ್ಮಾನ : ಈ ಮಹನೀಯರುಗಳ ಸಮ್ಮುಖದಲ್ಲಿ ಭಾರತೀಯ ಸಂಗೀತದ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಕೊಡುಗೆ ನೀಡುತ್ತಿರುವ ಸಾಧಕರನ್ನು ಸನ್ಮಾನಿಸುವ ಸಾರ್ಥಕ ಕಾರ್ಯ ಸಮಾರಂಭದ ಬಹಳ ಮುಖ್ಯ ಅಂಗವಾಗಿರುವುದು.
ಪ್ರಧಾನ ಪ್ರಸ್ತುತಿ : ಸಂಜೆ 7.30ಕ್ಕೆ ಉದ್ಘಾಟನಾ ಸಭಾಕಲಾಪದ ನಂತರ ಹಿಂದೂಸ್ಥಾನಿ ಸಂಗೀತದ ಪ್ರಸಿದ್ಧ ವೇಣು ವಾದಕರಾದ ರೋಣು ಮಜುಂದಾರ್ ರವರರಿಂದ ಬಾನ್ಸುರಿ ವಾದನದ ಜತೆಗೆ ಕರ್ನಾಟಕ ಸಂಗೀತದ ಮೈಸೂರಿನ ವಿದ್ವಾಂಸರುಗಳಾದ ಮೈಸೂರು ಎಂ.ನಾಗರಾಜ್ ಮತ್ತು ಡಾ. ಮೈಸೂರು ಎಂ ಮಂಜುನಾಥ್ ರವರ ಪಿಟೀಲು ನಾದ ಸುಧೆಯ ಜುಗಲಬಂದೀ ಆ ದಿನದ ಪ್ರಮುಖ ಸಂಗೀತ ಕಾರ್ಯಕ್ರಮವಾಗಿರುತ್ತದೆ.
ನಾದ ಸುಧೆ : ದಿನಾಂಕ 20ರಂದು ಬೆಳಗ್ಗೆ ಡಾ. ಬಾಲಮುರಳಿ ಕೃಷ್ಣರವರಿಂದ ಸಂಗೀತ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳ ಜೊತೆಯಲ್ಲಿ ಸಂವಾದ, ನಂತರ 9 ಘಂಟೆಯಿಂದ ಮೈಸೂರಿನ ವಿದುಷಿ ರಾಜಲಕ್ಷ್ಮಿಯವರಿಂದ ವೀಣೆ, ಪುಣೆಯ ಪಂ ಉದಯ ಭವಾಲ್ಕರ್, ಜೈಪುರದ ಡಾ ಮದುಭಟ್ ತೆಯಲಂಗ್ ರವರ ಹಿಂದೂಸ್ಥಾನಿ ದ್ರುಪದ್ ಗಾಯನ ಹಾಗೂ ಮೈಸೂರಿನ ಡಾ ಆರ್ ಎನ್ ಶ್ರೀಲತರವರಿಂದ ಕರ್ನಾಟಕ ಸಂಗೀತ ಕಾರ್ಯಕವರಮಗಳು. ಭೋಜನ ವಿರಾಮದ ನಂತರ ಪರಿಚರ್ಚೆ, ನಂತರ ನಾಗಪುರದ ಡಾ ಕಮಲಾಬೋಂಡೆ ಯವರ ಹಿಂದೂಸ್ಥಾನಿ ಗಾಯನ, ಕೇರಳದ ಶೇರ್ತಲೈ ರಂಗನಾಥ ಶರ್ಮರವರಿಂದ ಕರ್ನಾಟಕ ಸಂಗೀತ, ಪದ್ಮವಿಭೂಷಣ ಡಾ. ಎನ್ ರಮಣಿಯವರ ವೇಣುವಾದನ ಹಾಗೂ ದಿನದ ಅಂತ್ಯದಲ್ಲಿ ಪ್ರಸಿದ್ದ ದ್ರುಪದ್ ಗಾಯಕರಾದ ಪುಣೆಯ ಉಸ್ತಾದ್ ಸಯೀದುದ್ದೀನ್ ಡಾಗರ್ ರವರಿಂದ ದ್ರುಪದ್ ಗಾಯನ ಏರ್ಪಟ್ಟಿದೆ.
ದಿನಾಂಕ 21 ರಂದು ಬೆಳಗ್ಗೆ 7ಕ್ಕೇ ಸಂಗೀತ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳ ಜೊತೆಯಲ್ಲಿ ಸಂವಾದ, ನಂತರ ಕರ್ನಾಟಕ ಕಲಾಶ್ರೀ ಡಾ ಆರ್.ಕೆ.ಶ್ರೀಕಂಠನ್ ಮತ್ತು ವಿದ್ವಾನ್ ಆರ್ ಎಸ್ ರಮಾಕಾಂತರವರ ಕನಾಟಕ ಸಂಗೀತ, ಮಂಜರಿ ಅಲೆಗಾಂಕರ್ ಪುಣೆ ಹಿಂದೂಸ್ಥಾನಿ ಗಾಯನ, ಪಂಡಿತ ಶ್ರಿ ದತ್ತ , ನವದೆಹಲಿ ಅವರ ಹಿಂದೂಸ್ಥಾನಿ ಗಾಯನ, ವಿದ್ವಾನ್ ಎಸ್ ಶಂಕರ್ ಬೆಂಗಳೂರು ಅವರ ಕಾರ್ನಾಟಕ ಸಂಗೀತ, ಜರುಗಲಿದೆ. ಭೋಜನದ ನಂತರ, ಅಸ್ಸಾಮಿನ ಪಂ ಭವೇಶ ಕಲಿತೆ, ಭುವನೇಶ್ವರದ ಪಂಡಿತ್ ದೇವೇಂದ್ರ ಸತ್ಪತಿ ಹಾಗೂ ಗ್ವಾಲಿಯರ್ನ ಪಂಡಿತ್ ಸಾಧನಾಮೋಹಿತೆ ಇವರುಗಳ ಹಿಂದೂಸ್ಥಾನಿ ಗಾಯನ ಏರ್ಪಟ್ಸಿದೆ. ಸಂಜೆ 5.30 ಕ್ಕೆ ಕನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ನರಸಿಂಹಲು ವಡಿವಾಟಿ, ಕನಾಟಕ ಸರಕಾರಕ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಆರ್. ಜಯರಾಮ ರಾಜೆ ಅರಸ್, ಹಾಗೂ ಆಯುಕ್ತರಾದ ಮನು ಬಳಿಗಾರ್ ರವರ ಉಪಸ್ಥಿತಿಯಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭ ನಂತರ ಚೆನ್ನೈನ ವಿದ್ವಾನ್ ಓ.ಎಸ್. ತ್ಯಾಗರಾಜನ್, ರವರ ಕರ್ನಾಟಕ ಸಂಗೀತ ಹಾಗೂ ವಾರಣಾಸಿ ಪಂಡಿತ ಶ್ರಿ ಚಿತ್ತರಂಜನ ಜ್ಯೋತಿಷಿ ಅವರ ಹಿಂದೂಸ್ಥಾನಿ ಗಾಯನದ ಪ್ರಸ್ಥುತಿ ನಾದ ಮಂಟಪದಲ್ಲಿ ಹರಿಯಲಿದೆ.
ಸಂಗೀತ ಯಜ್ಞ : ಕಡೆಯ ದಿನ 22ರಂದು ಬೆಳಗ್ಗೆ ವಿದ್ವಾನ್ ಆರ್.ಕೆ.ಪದ್ಮನಾಭ ಮತ್ತವರ ತಂಡದಿಂದ ಸಂಗೀತ ಯಜ್ಞ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಗಳವರಿಂದ ನಾದ ಸುಧೆ ಹಾಗೂ ಎಲ್ಲಾ ಕರ್ನಾಟಕ ಸಂಗೀತ ವಿದ್ವಾಂಸರು ಮತ್ತವರ ಶಿಷ್ಯರು ಪೂಜ್ಯ ಶ್ರೀ ಸ್ವಾಮೀಜಿಯವರ ಸಮ್ಮುಖದಲ್ಲಿ ನಡೆಸಿಕೊಡುವ ಸಂಗೀತ ಬ್ರಹ್ಮ ಶ್ರೀ ತ್ಯಾಗರಾಜರ ಪಂಚರತ್ನಕೃತಿಗಳ ಬೃಹತ್ ಗೋಷ್ಠಿಗಾಯನ ಹಾಗೂ ಸಂಸ್ಕಾರ ಭಾರತಿಯ ರಾಷ್ಟೀಯ ಆಧ್ಯಕ್ಷರಾದ ರಾಜದತ್ತ ರವರ ಅಧ್ಯಕತೆಯಲ್ಲಿ ಸಂಗಿತೋತ್ಸವದ ಸಮಾರೋಪ ಕಾರ್ಯಕ್ರಮ.
ಸ್ಮರಣ ಸಂಚಿಕೆ : ಕೇಂದ್ರ ಸಾಹಿತ್ಯ ಅಕೆಡಮಿ ಪ್ರಶಸ್ತಿ ಪುರಸ್ಕೃತರಾದ ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣ ಅವರ ಸಂಪಾದಕತ್ವದಲ್ಲಿ ತ್ರಿಭಾಷೆಗಳ ಲೇಖನಗಳನ್ನು ಹೊಂದಿರುವ ಸ್ಮರಣ ಸಂಚಿಕೆ ಈ ಉತ್ಸವದ ವೈಶಿಷ್ಟ್ಯ.
ಭಾಗವಹಿಸುವಿಕೆ : ಈ ಉತ್ಸವದಲ್ಲಿ ಸಂಗೀತ ವಿದ್ಯಾರ್ಥಿಗಳು, ಸಂಗೀತಗಾರರು, ಸಂಗೀತಾಭಿಮಾನಿಗಳು ಪ್ರತಿನಿಧಿಗಳಾಗಿ ಭಾಗಹಿಸಬಹುದು. ಪ್ರತಿನಿಧಿಗಳಿಗೆ ಸಂಸ್ಕಾರ ಭಾರತಿಯ ವತಿಯಿಂದ ಕಾರ್ಯಕ್ರಮದ ನಾಲ್ಕೂ ದಿನಗಳು ಉಟ, ಉಪಹಾರ, ಹೊರ ಊರುಗಳಿಂದ ಬರುವವರಿಗೆ ವಸತಿಯ ವ್ಯವಸ್ಥೆ ಮಾಡಲಾಗಿದೆ. ಈ ಉತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಮಂಗಳೂರು ಗಣೇಶ ಬೀಡಿ ಸಂಸ್ಥೆಯ ಮಾಲೀಕರಾದ ಜಗನ್ನಾಥ ಶೆಣೈ, ಕಾರ್ಯಾಧ್ಯಕ್ಷರಾಗಿ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳೂ, ಶಾಸಕರೂ ಆದ ಎಸ್.ಎ.ರಾಮದಾಸ್, ಕಾರ್ಯದರ್ಶಿಯಾಗಿ ಕೆ.ಪಿ.ಪ್ರದ್ಯುಮ್ನ ಮತ್ತು ಸಹ ಕಾರ್ಯದರ್ಶಿಯಾಗಿ ಎನ್ ಆರ್ ಮಂಜುನಾಥ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮದ ವಿವರಗಳಿಗೆ ಈ ದೂರವಾಣಿಗಳನ್ನು ಸಂಪರ್ಕಿಸಬಹುದು.
ಸಂಚಾಲನ ಸಮಿತಿಯ ಸದಸ್ಯರ ಪರವಾಗಿ,
ಕೆ.ಪಿ.ಪ್ರದ್ಯುಮ್ನ
ದೂರವಾಣಿ: 94482 91368
ಇ-ಮೈಲ್ [email protected]
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications