ಕುಮಾರಸ್ವಾಮಿ ಕಣ್ಣು ಲೋಕಸಭೆ ಮೇಲೆ
ಬೆಂಗಳೂರು, ಫೆ. 1: ಪಕ್ಷದ ಕಾರ್ಯಕರ್ತರು ಬಯಸಿದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದಬಿಜೆಪಿ ಸರ್ಕಾರ, ಸಮಾಜದಲ್ಲಿ ಬರೀ ಅನೈತಿಕ ಚಟುವಟಿಕೆಗಳೇ ತಾಂಡವವಾಗುತ್ತಿವೆ. ಇದಕ್ಕೆಲ್ಲ ಸರಿಯಾದ ಪಾಠ ಕಲಿಸಬೇಕು. ಲೋಕಸಭೆಯಲ್ಲಿ ಕನ್ನಡ ಪರ ದನಿಯೆತ್ತುವವರು ಇಲ್ಲವಾಗಿದ್ದಾರೆ.ಆದ್ದರಿಂದ ಈ ಬಗ್ಗೆ ಚಿಂತಿಸುತ್ತಿದ್ದೇನೆ. ಪಕ್ಷದ ಮುಖಂಡರೊಡನೆ ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆ ಇಡಲಿದ್ದೇನೆ. ಜೆಡಿಎಸ್ ಏಕಾಂಗಿಯಾಗಿ ಲೋಕಸಭೆಗೆ ಸ್ಪರ್ಧಿಸಲಿದೆ ಎಂದು ಕುಮಾರಸ್ವಾಮಿ ಹೇಳಿದರು. ಪಕ್ಷದ ಸಂಘಟನೆಯ ಸಲುವಾಗಿ ದೇವೇಗೌಡ ಅವರು ಫೆ. 8 ರಂದು ಬಳ್ಳಾರಿ ನಗರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.
ಸಿದ್ದು ಸ್ಪರ್ಧೆಯಿಲ್ಲ: ಆರ್ ವಿದೇಶಪಾಂಡೆ ಅವರು ಕೆಪಿಸಿಸಿ ಅಧ್ಯಕ್ಷರ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿ ದೆಹಲಿ ತನಕ ಮುಟ್ಟಿದ ಹಿನ್ನೆಲೆಯಲ್ಲಿ ದೇಶಪಾಂಡೆ ಪ್ರತಿಕ್ರಿಯಿಸಿದ್ದು, ಈ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಈ ನಡುವೆ ಲೋಕಸಭೆಗೆ ತಾನು ಸ್ಪಧಿಸುವುದಿಲ್ಲ ಎಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡವಾರ್ತೆ)
ಸಿದ್ದು, ಸೋನಿಯಾ ಭೇಟಿ; ಖರ್ಗೆ ಅಸಮಾಧಾನ!












Click it and Unblock the Notifications