ನಗರದ ಐಐಎಸ್ಸಿ ದಾಳಿ ರುವಾರಿ ಹಂಜಾ ಹತ
ಬಾರಮುಲ್ಲಾ/ಕಾಶ್ಮೀರ, ಜ.29: ಇಲ್ಲಿನ ಉತ್ತರಭಾಗದ ಬಾರಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್ ಇ ತೋಯ್ಬಾ ಸಂಘಟನೆಯ ಸೇನಾನಿ ಅಬು ಹಂಜಾನನ್ನು ಹತ್ಯೆ ಮಾಡಲಾಗಿದೆ. ಸ್ಥಳೀಯ ಪೊಲೀಸರು, ಸಿಆರ್ ಪಿಎಫ್ ಹಾಗೂ ವಿಶೇಷ ದಳ ಸೇರಿ ಸುಮಾರು 18 ಗಂಟೆಗಳ ನಡೆಸಿದ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಗುಂಡಿನ ಕಾಳಗದಲ್ಲಿ ಜೈಷ್ ಇ ಮೊಹಮದ್ ನ ಒಬ್ಬ ಮುಖಂಡ ಹಾಗೂ ಇಬ್ಬರು ಸೈನಿಕರು ಸಹ ಸಾವನ್ನಪ್ಪಿದ್ದಾರೆ. 7 ಜನರಿಗೆ ಗಾಯಗಳಾಗಿವೆ.
ಮುಂಬೈ ಉಗ್ರರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಬು ಹಂಜಾ, ಪಾಕಿಸ್ತಾನದಲ್ಲಿ ನೆಲೆ ನಿಂತು, ಉಗ್ರರ ಚಟುವಟಿಕೆಗಳ ನಿಗಾವಿಸುತ್ತಿದ್ದ ಎನ್ನಲಾಗಿದೆ. ಬಾಂಬ್ ಸ್ಫೋಟ, ಉಗ್ರರ ದಾಳಿ ಸೇರಿದಂತೆ ಹಲವಾರು ಕಾನೂನು ಬಾಹಿರ ಕೃತ್ಯಗಳನ್ನು ರೂಪಿಸುವುದರಲ್ಲಿ ಹಂಜಾ ಸಿದ್ಧ ಹಸ್ತನಾಗಿದ್ದ. 2005 ರಲ್ಲಿ ಬೆಂಗಳೂರಿನ ಐಐಎಸ್ಸಿ ಯಲ್ಲಿ ದಾಳಿ ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಂಜಾ, ಪ್ರೊಫೆಸರ್ ಒಬ್ಬರ ಸಾವಿಗೆ ಮುನ್ನುಡಿ ಬರೆದಿದ್ದ.
ಪಾಕಿಸ್ತಾನದ
ಅಧ್ಯಕ್ಷ
ಜರ್ದಾರಿ
ಅವರು
ಹಂಜಾ
ಸೇರಿದಂತೆ
ಹಲವಾರು
ಎಲ್
ಇಟಿ
ಉಗ್ರರನ್ನು
ಪಾಕಿಸ್ತಾನಿಗಳೆಂದು
ಒಪ್ಪದೆ,
ಭಾರತದ
ಆರೋಪ
ಸುಳ್ಳು
ಎಂದು
ಹೇಳಿದ್ದರು.
ಎಲ್
ಇಟಿಗೆ
ದೇಣಿಗೆ
ನೀಡುವ
ಸಂಘಟನೆ
ಜಮಾತ್
ಉದ್
ದವಾ
ಮೇಲೆ
ದಾಳಿ
ಮಾಡಿ
ಕೆಲವು
ನಾಯಕರನ್ನು
ಸೆರೆ
ಹಿಡಿಯುವ
ಮೂಲಕ
ತನ್ನ
ಮೇಲಿದ್ದ
ಒತ್ತಡವನ್ನು
ಪಾಕಿಸ್ತಾನ
ಹಗುರಾಗಿಸಿಕೊಂಡಿತ್ತು.
(ಏಜೆನ್ಸೀಸ್)