ಪತ್ರಕರ್ತರೆ ದೊಡ್ಡ ಭಯೋತ್ಪಾದಕರು, ಜರ್ದಾರಿ
ಇಸ್ಲಾಮಾಬಾದ್, ಜ. 19 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪ್ರಥಮ ಬಾರಿಗೆ ಮಾಧ್ಯಮ ವಿರುದ್ಧ ಪಾಕ್ ಅಧ್ಯಕ್ಷ ಆಸೀಫ್ ಅಲೀ ಜರ್ದಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬೈ ದಾಳಿಯ ವಿಷಯದಲ್ಲಿ ಮಾಧ್ಯಮಗಳು ಹಾಗೂ ಕೆಲ ಪತ್ರಕರ್ತರ ಅನಾವಶ್ಯಕವಾಗಿ ಘಟನೆಯನ್ನು ವೈಭವೀಕರಿಸಿದರು. ನಿಜವಾದ ಉಗ್ರರಿಗಿಂತ ಪತ್ರಕರ್ತರೆ ದೊಡ್ಡ ಭಯೋತ್ಪಾದಕರು ಎಂದು ಅವರು ಜರಿದಿದ್ದಾರೆ.
ಕೈಗಾರಿಕೋಧ್ಯಮಿಗಳು ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈ ದಾಳಿಯ ನಂತರ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ವರದಿ ಮಾಡಿವೆ ಎಂದು ಖೇದ ವ್ಯಕ್ತಪಡಿಸಿದರು. ಮಾಧ್ಯಮಗಳ ವೈಭವೀಕರಣದ ವರದಿಯಿಂದಾಗಿ ಸರ್ಕಾರ ಅನೇಕ ಬಾರಿ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಇದರಿಂದಾಗಿ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಲೆ ತಗ್ಗಿಸುವಂತ ಘಟನೆಯೂ ನಡೆದಿದೆ. ಇದೆಲ್ಲವೂ ಮಾಧ್ಯಮಗಳು ಮಾಡಿದ ಅನಾವಶ್ಯಕ ವರದಿಯಿಂದಾಗಿ ಎಂದು ಅವರು ಕಿಡಿಕಾರಿದರು.
ಮಾಧ್ಯಮಗಳ ಮೇಲೆ ಅಪಾರ ಗೌರವವಿದೆ, ಆದರೆ ಹೊಣೆ ಅರಿತು ಕೆಲಸ ಮಾಡಿ, ಸತ್ಯಾಸತ್ಯತೆಗಳನ್ನು ತಿಳಿದುಕೊಂಡು ವರದಿ ಮಾಡಿದರೆ ಎಲ್ಲರಿಗೂ ಕ್ಷೇಮ. ಅದನ್ನು ಬಿಟ್ಟು ಸಾರ್ವಜನಿಕರ ಗಮನ ಸೆಳೆಯುವಂತ ಕಟ್ಟುಕತೆ ವರದಿ ಮಾಡುವುದು ಸಲ್ಲ ಎಂದು ಜರ್ದಾರಿ ಮಾಧ್ಯಮಗಳಿಗೆ ಕಿವಿ ಮಾತು ಹೇಳಿದ್ದಾರೆ.
(ಏಜನ್ಸೀಸ್)
ಪಾಕ್ ಗೆ ಉಗ್ರ ಕಸಬ್ ಡಿಎನ್ಎ ಸ್ಯಾಂಪಲ್











Click it and Unblock the Notifications