ದಣಿವಾರಿಸಿಕೊಳ್ಳಲು ಧೋನಿ ಮಡಿಕೇರಿಗೆ ಆಗಮನ

MS Dhoni arrives to Madikeri on vacation
ಮಡಿಕೇರಿ, ಜ. 10 : ಇತ್ತೀಚೆಗೆ ತಾನೆ ಮುಗಿದಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ, ಏಕದಿನ, ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಭಾರದಿಂದ ದಣಿದಿರುವ ಮಹೇಂದ್ರ ಸಿಂಗ್ ಧೋನಿ ದಣಿವಾರಿಸಿಕೊಳ್ಳಲು ಕರ್ನಾಟಕದ ತಂಪಿನ ತಾಣ ಮಡಿಕೇರಿಯನ್ನು ಆರಿಸಿಕೊಂಡಿದ್ದಾರೆ.

ಧೋನಿ ಅವರೊಡನೆ ಕರ್ನಾಟಕದ ಕುವರ, ಮಡಿಕೇರಿಯ ಸುಪುತ್ರ ರಾಬಿನ್ ಉತ್ತಪ್ಪ ಮತ್ತು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಕೂಡಿಕೊಂಡಿರುವುದು ಮಡಿಕೇರಿಯ ಕ್ರೀಡಾ ಪ್ರೇಮಿಗಳಲ್ಲಿ ಭಾರೀ ಪುಳಕವನ್ನುಂಟು ಮಾಡಿದೆ. ಝಡ್ ಶ್ರೇಣಿಯ ಭದ್ರತೆ ಪಡೆದಿರುವ ಧೋನಿ ಇಲ್ಲಿ ಯಾವುದೇ ರಕ್ಷಣೆಯ ಹಂಗಿಲ್ಲದೆ ಆರಾಮವಾಗಿ ಕಳೆಯಲು ಬಂದಿದ್ದಾರೆ. ರಾಬಿನ್ ಉತ್ತಪ್ಪ ಅವರ ಮನೆಯಲ್ಲಿ ಮೂವರು ತಂಗಿದ್ದಾರೆ.

ಬಹಳಕಾಲದ ಮಿತ್ರರಾಗಿರುವ ಈ ತ್ರಿಮೂರ್ತಿಗಳು ಅಭಿಮಾನಿಗಳ ಆಟೋಗ್ರಾಫ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬೇಕೆಂದು ಕದ್ದುಮುಚ್ಚಿ ಬೆಂಗಳೂರಿನಿಂದ ಇಲ್ಲಿಗೆ ಕಳೆದ ರಾತ್ರಿ ಆಗಮಿಸಿದ್ದರು. ಆದರೆ, ಅದು ಹೇಗೋ ಅಲ್ಲಿನ ಕ್ರೀಡಾಪ್ರೇಮಿಗಳಿಗೆ ಗೊತ್ತಾಗಿಬಿಟ್ಟಿದೆ. ಇನ್ನು ಪತ್ರಕರ್ತರಿಗೆ ಈ ಸುದ್ದಿ ನಿಲುಕುವುದು ಕಷ್ಟವೇನಲ್ಲ. ಆದರೆ, ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಧೋನಿ.

ಭಾರತದ ಮುಂದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಮಾರ್ಚ್ 8ರಿಂದ ನ್ಯೂಜಿಲಂಡ್ ವಿರುದ್ಧ ಪ್ರಾರಂಭವಾಗಲಿದೆ. ಸತತವಾಗಿ ಕ್ರಿಕೆಟ್ ಆಡುವ ಆಟಗಾರರಿಗೆ ಈ ದೀರ್ಘ ಬಿಡುವು ಬಯಸದೇ ಬಂದ ಭಾಗ್ಯದಂತಾಗಿದೆ.

(ದಟ್ಸ್ ಕ್ರಿಕೆಟ್ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+