ಕರ್ಕರೆಗೆ ಅಶೋಕ್ ಚಕ್ರ ನೀಡಲು ಶಿಫಾರಸು

ದಾಳಿ ನಡೆದ ರಾತ್ರಿ ಉಗ್ರರನ್ನು ಹತ್ತಿಕ್ಕಿದ ಸಹಾಯಕ ಸಬ್ ಇನ್ಸ್ ಪೆಕ್ಟರ್ ತುಕಾರಾಂ ಓಂಬ್ಲೆ ಹೆಸರು ಸಹ ಪಟ್ಟ್ಟಿಯಲ್ಲಿದೆ. ಓಂಬ್ಲೆ ದಾಳಿ ನಡೆದ ರಾತ್ರಿ ಉಗ್ರರೊಂದಿಗೆ ಮುಖಾಮುಖಿ ಹೋರಾಟ ಮಾಡಿದ್ದರು. ಉಗ್ರರ ಮೇಲೆ ಅವರು ಗುಂಡಿನ ದಾಳಿ ಮಾಡುತ್ತಿದ್ದರೆ ಉಳಿದ ಪೋಲೀಸರು ಪ್ಲಾನ್ ಪ್ರಕಾರ ಉಗ್ರರನ್ನು ಮಟ್ಟಹಾಕುವ ಅವಕಾಶ ಸಿಕ್ಕಿತು. ಇದರ ಫಲಿತಾಗಿ ಓರ್ವ ಉಗ್ರನನ್ನು ಜೀವಂತವಾಗಿ ಹಿಡಿಯಲು ಸಾಧ್ಯವಾಯಿತು. ಆದರೆ ಈ ಹೋರಾಟದಲ್ಲಿ ತುಕಾರಾಂ ಓಂಬ್ಲೆ ಉಗ್ರರ ಗುಂಡಿಗೆ ಬಲಿಯಾದರು.
ಪತ್ನಿ ಮತ್ತು ನಾಲ್ಕು ಮಂದಿ ಹೆಣ್ಣುಮಕ್ಕಳ ತುಂಬು ಕುಟುಂಬ ತುಕಾರಾಂ ಅವರದು. ತುಕಾರಾಂ ಸಂಪಾದನೆ ಮೇಲೆ ಆಧಾರಪಟ್ಟ ಕುಟುಂಬ. ಇವರೊಂದಿಗೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಹೆಚ್ಚುವರಿ ಕಮೀಷನರ್ ಕಾಂಮ್ಟೆ, ಎನ್ ಕೌಂಟರ್ ಸ್ಪೆಷಲಿಸ್ಟ್ ಸಲಾಸ್ಕರ್ ಹೆಸರುಗಳು ಅಶೋಕ ಚಕ್ರ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಮುಂಬೈ ದಾಳಿಯಲ್ಲಿ 16 ಮಂದಿ ಪೊಲೀಸರು ಜೀವತೆತ್ತಿದ್ದಾರೆ. ಇವರಲ್ಲಿ 13 ಮಂದಿ ಹೆಸರುಗಳನ್ನು ಅಶೋಕ ಚಕ್ರ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ.(ಏಜೆನ್ಸೀಸ್)












Click it and Unblock the Notifications