ದಾವೂದ್ ಸೇರಿ 20 ಉಗ್ರರನ್ನು ಭಾರತದ ವಶಕ್ಕೆ ಕೊಡಿ
ನವದೆಹಲಿ, ಡಿ. 2 : ದಾವೂದ್ ಇಬ್ರಾಹಿಂ ಸೇರಿದಂತೆ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ 20 ಮೊಸ್ಟ್ ವಾಂಟೆಡ್ ಟೆರರಿಸ್ಟ್ ಗಳನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಪಾಕಿಸ್ತಾನದ ಮೇಲೆ ತೀವ್ರ ಒತ್ತಡ ಹೇರಿದ್ದಾರೆ. ಪಾಕ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಕಳೆದ ಬುಧವಾರ (ನ. 26) ಮುಂಬೈನಲ್ಲಿ ನಡೆಸಿದ ಭಯೋತ್ಪಾದನಾ ಸಂಘಟನೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕಿತರ ವಿರುದ್ಧ ಉಗ್ರ ಕ್ರಮಕೈಗೊಳ್ಳಬೇಕು ಎಂದು ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಭಾರತದಲ್ಲಿ ಈ ವರೆಗೂ ನಡೆಸಿದ ವಿಧ್ವಂಸಕ ಕೃತ್ಯಗಳಲ್ಲಿ ಕೈವಾಡವಿರುವ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಅಶ್ರಯ ಪಡೆದಿದ್ದಾರೆ. ಈ ಎಲ್ಲ ಆರೋಪಿಗಳ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ಶೀಘ್ರದಲ್ಲಿ ಈ ಎಲ್ಲ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಮನವಿ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಪಾಕಿಸ್ತಾನದಿಂದ ಬರುವ ಉತ್ತರಕ್ಕಾಗಿ ಎದುರು ನೋಡುತ್ತಿರುವುದಾಗಿ ಮುಖರ್ಜಿ ಸ್ಪಷ್ಟಪಡಿಸಿದರು.
ಪ್ರಣಬ್ ಮುಖರ್ಜಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಕಚೇರಿ ಹಿರಿಯ ಅಧಿಕಾರಿ ಶಾಹಿದ್ ಮಲಿಕ್, ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಸೇರಿದ ಪ್ರಜೆಗಳು ನಡೆಸಿದ ಕೃತ್ಯ ಎನ್ನುವ ಆರೋಪಗಳು ಕೇಳಿಬರುತ್ತಿವೆ. ತನಿಖೆಯಿಂದ ಈ ಆರೋಪ ದೃಡಪಟ್ಟಲ್ಲಿ ಕ್ರಮಕೈಗೊಳ್ಳುವಲ್ಲಿ ಹಿಂದೇಟು ಹಾಕುವುದಿಲ್ಲ. ಪಾಕ್ ಸರ್ಕಾರ ಇದರ ಸಮಗ್ರ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು.
ಭಾರತಕ್ಕೆ
ಭೇಟಿ
ನೀಡಿರುವ
ಅಮೆರಿಕದ
ವಿದೇಶಾಂದ
ಕಾರ್ಯದರ್ಶಿ
ಕಂಡೋಲಿಜಾ
ರೈಸ್
ಕೂಡಾ
ಘಟನೆಯನ್ನು
ತೀವ್ರ
ಖಂಡಿಸಿದ್ದಾರೆ.
ಕೃತ್ಯದಲ್ಲಿ
ಪಾಕ್
ಕೈವಾಡವಿದೆ
ಎನ್ನುವ
ಆರೋಪಗಳು
ಕೇಳಿಬರುತ್ತಿದ್ದು,
ಈ
ಹಿನ್ನೆಲೆಯಲ್ಲಿ
ಭಾರತ
ನಡೆಸುವ
ಎಲ್ಲ
ತನಿಖೆಗಳಿಗೆ
ಸಹಕರಿಸಬೇಕು
ಎಂದು
ಪಾಕಿಸ್ತಾನಕ್ಕೆ
ರೈಸ್
ಸೂಚನೆ
ನೀಡಿದ್ದಾರೆ.
ಭಾರತ
ಭೇಟಿ
ನಂತರ
ರೈಸ್
ಪಾಕಿಸ್ತಾನಕ್ಕೆ
ಭೇಟಿ
ನೀಡಲಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)