ಯಡಿಯೂರಪ್ಪ ಸುಳ್ಳಿನ ಸರದಾರ: ಉಗ್ರಪ್ಪ
ಬೆಂಗಳೂರು, ನ. 21 : ಮುಖ್ಯಮಂತ್ರಿ ಯಡಿಯೂರಪ್ಪ ಸುಳ್ಳಿನ ಸರದಾರ, ಸಚಿವರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸದೇ ಕಾಲಹರಣ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸತೊಡಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ವಿ ಎಸ್ ಉಗ್ರಪ್ಪ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಆಭಾವವನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಳಿಗಾಲದ ಅಧಿವೇಶನ ನಡೆಸದ ಸರ್ಕಾರ ಜನರಿಗೆ ಮೋಸ ಎಸಗತೊಡಗಿದೆ ಎಂದರು. ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ವಿದ್ಯುತ್ ಸಮಸ್ಯೆ ಮತ್ತಷ್ಟು ಹೆಚ್ಚಾದರೂ ಸೂಕ್ತ ಕ್ರಮಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ವಿದ್ಯುತ್ ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ವಿದ್ಯುತ್
ಸಮಸ್ಯೆಯನ್ನು
ಸರಿಯಾಗಿ
ನಿಭಾಯಿಸದ
ಸರ್ಕಾರ
ವಿನಾಕಾರಣ
ಕೇಂದ್ರ
ಸರ್ಕಾರದ
ಮೇಲೆ
ಗೂಬೆ
ಕೂರಿಸುವ
ಕೆಲಸದಲ್ಲಿ
ನಿರತವಾಗಿದೆ.
ಛತ್ತೀಸ್
ಗಢದಿಂದ
ವಿದ್ಯುತ್
ತರುವ
ವಿಷಯವನ್ನು
ಹೇಳಿಕೊಂಡು
ಓಡಾಡುತ್ತಿದೆ
ಹೊರತು
ಅದನ್ನು
ಕಾರ್ಯರೂಪಕ್ಕೆ
ತಂದಿಲ್ಲ.
ಯಡಿಯೂರಪ್ಪ
ಬರೀ
ಸುಳ್ಳು
ಹೇಳುತ್ತ
ಕಾಲ
ತಳ್ಳುತ್ತಿದ್ದಾರೆ.
ಈ
ಸರ್ಕಾರದ
ಆಡಳಿತದಿಂದ
ಜನರು
ಭ್ರಮನಿರಶನಗೊಳ್ಳುವಂತಾಗಿದೆ
ಎಂದು
ಟೀಕಿಸಿದರು.
(ದಟ್ಸ್
ಕನ್ನಡ
ವಾರ್ತೆ)