ಮಾಂತ್ರಿಕ ಕುಂವೀ ಜತೆ ರಾಯಲ ಸೀಮೆ ಕಥೆ ಕೇಳಿ
ಬೆಂಗಳೂರು, ಸೆ.10: ಕುಂ.ವೀರಭದ್ರಪ್ಪ ಕನ್ನಡ ಸಾಹಿತ್ಯಲೋಕ ಕಂಡ ವಿಶಿಷ್ಟ ಕತೆಗಾರ. ಬೆಚ್ಚಿ ಬೀಳಿಸುವ ಲೋಕವೊಂದನ್ನು ತನ್ನ ವಿಕಟ ನಿರೂಪಣೆಯಿಂದಲೇ ಬಿಚ್ಚಿಟ್ಟ ದಿಟ್ಟ ಕತೆಗಾರ. ಕತೆ ಹೇಳಲು ಎಂದೂ ಆಯಾಸಗೊಳ್ಳದ ಸೃಜನಶೀಲತೆಯ ಅಕ್ಷಯಪಾತ್ರೆ.
ಈ ಅಪರೂಪದ ಕತೆಗಾರನ ಜೊತೆ ಈ ಭಾನುವಾರದ(ಸೆ.14) ಸಂಜೆಯನ್ನು ಕಳೆಯಲು ಛಂದ ಪುಸ್ತಕವು ಅವಕಾಶ ಮಾಡಿಕೊಡುತ್ತಿದೆ. ಮಳೆಯ ನೆಪವೊಡ್ಡದೆ ದಯವಿಟ್ಟು ಹೋಗಿ ಬನ್ನಿ! ಕಾರ್ಯಕ್ರಮದಲ್ಲಿ ಕಿ.ರಂ.ನಾಗರಾಜ್, ಓ.ಎಲ್.ನಾಗಭೂಷಣಸ್ವಾಮಿ, ಮಂಜುನಾಥ್ ಲತಾ, ವಿಕ್ರಮ ವಿಸಾಜಿ, ಆನಂದ ಋಗ್ವೇದಿ, ಕವಿತಾ ಕುಸುಗಲ್ಲ, ನಟ ಕರಿಬಸವಯ್ಯ ಉಪಸ್ಥಿತರಿರುತ್ತಾರೆ.
ಸ್ಥಳ: ಎನ್ ಎಂಕೆಆರ್ ವಿ ಕಾಲೇಜು, ಶಾಶ್ವತಿ ಸಭಾಂಗಣ, ಜಯನಗರ 3ನೇ ಬ್ಲಾಕ್, ಬೆಂಗಳೂರು
ಸಮಯ: ಸಂಜೆ 3.30ಕ್ಕೆ
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications