ರಜೆ ಘೋಷಿಸಿದ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ
ಬೆಂಗಳೂರು, ಆ.29: ರಾಜ್ಯ ಸರ್ಕಾರದ ಅನುಮತಿ ಪಡೆಯದೆ ಕ್ರೈಸ್ತ ಮಿಷನರಿಗಳು ಶುಕ್ರವಾರ (ಆ.29) ಶಾಲೆಗಳಿಗೆ ರಜೆ ನೀಡಿರುವುದು ಕಾನೂನು ಬಾಹಿರ ಕ್ರಮ. ಇಂತಹ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಶುಕ್ರವಾರ ರಾಜ್ಯದ 2200 ಕ್ಕೂ ಅಧಿಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿವೆ. ಇವುಗಳಲ್ಲಿ ಬಹಳಷ್ಟು ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನ ಪಡೆಯುತ್ತಿದ್ದು ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ಬಂದ್ ಘೋಷಿಸಿವೆ. ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಕೆಲವೆಡೆ ಸರ್ಕಾರಿ ಶಾಲೆಗಳನ್ನು ಮುಚ್ಚಿಸುವ ಪ್ರಯತ್ನವೂ ನಡೆದಿದೆ. ಆಯಾ ತಾಲೂಕಿನ ಶಿಕ್ಷಣಾಧಿಕಾರಿಗಳಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಕೆಲವೆಡೆ ಕ್ರೈಸ್ತ ಮಿಷನರಿ ಶಾಲೆಗಳಲ್ಲಿ ಮತಾಂತರ ಪ್ರಯತ್ನಗಳೂ ನಡೆಯುತ್ತಿರುವ ಕುರಿತು ದೂರುಗಳಿವೆ. ಇಂತಹ ಚಟುವಟಿಕೆಗಳು ಸಾಬೀತಾದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಉತ್ತರಿಸಿದರು. ಒರಿಸ್ಸಾದಲ್ಲಿ ನಡೆದ ಘಟನೆಯನ್ನು ಶಾಲಾ ಕಾಲೇಜುಗಳಿಗೆ ತಳುಕು ಹಾಕುವುದು ಸರಿಯಲ್ಲ. ಇಂತಹ ಕಾರಣಗಳಿಗೆ ಬಂದ್ ಆಚರಿಸಿದರೆ ಕಲಿಯುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವುದಿಲ್ಲವೆ ಎಂದು ಸಚಿವರು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ
ಕ್ರಮ
ಒರಿಸ್ಸಾ
ಗಲಭೆಯಲ್ಲಿ
ಕ್ರೈಸ್ತರ
ಮೇಲೆ
ಮಾಡಿದ
ದಾಳಿಯನ್ನು
ಖಂಡಿಸಿ
ಹುಬ್ಬ್ಬಳ್ಳಿಯ
ಕ್ರೈಸ್ತ
ಮಿಷನರಿಗಳು
ತಮ್ಮ
ಒಡೆತನದ
ಶಾಲಾ
ಕಾಲೇಜುಗಳಿಗೆ
ಶುಕ್ರವಾರ
ರಜೆ
ಘೋಷಿಸಿದ್ದವು.
ಈ
ಸಂಸ್ಥೆಗಳ
ವಿರುದ್ಧ
ಕ್ರಮಕೈಗೊಳ್ಳಬೇಕೆಂದು
ಬಿಜೆಪಿ
ಕಾರ್ಯಕರ್ತರು
ಕ್ಷೇತ್ರ
ಶಿಕ್ಷಣಾಧಿಕಾರಿಗಳನ್ನು
ಆಗ್ರಹಿಸಿದರು.
ಈ
ಹಿನ್ನೆಲೆಯಲ್ಲಿ
ಹುಬ್ಬಳ್ಳಿಯ
11
ಶಾಲೆಗಳ
ವಿರುದ್ಧ
ಶೋಕಾಸ್
ನೋಟೀಸ್
ಜಾರಿ
ಮಾಡಲಾಗಿದ್ದು
ಸಿಬ್ಬಂದಿಯ
1
ದಿನದ
ವೇತನ
ಕಡಿತಕ್ಕೆ
ಕ್ಷೇತ್ರ
ಶಿಕ್ಷಣಾಧಿಕಾರಿಗಳು
ಆದೇಶಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)