ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಸೇತು ರಾಗ ಬದಲಿಸಿದೆ ಕೇಂದ್ರ ಸರ್ಕಾರ

By Staff
|
Google Oneindia Kannada News

ನವದೆಹಲಿ, ಜು. 25 : ರಾಮಸೇತುವೆಯನ್ನು ಶ್ರೀರಾಮನೇ ಧ್ವಂಸ ಮಾಡಿದ್ದ ಬುಧವಾರವಷ್ಟೆ ನ್ಯಾಯಲಯದಲ್ಲಿ ಪ್ರತಿಪಾದನೆ ಮಾಡಿದ್ದ ಕೇಂದ್ರ ಸರ್ಕಾರ ಸೇತು ಸಮುದ್ರಂ ಯೋಜನೆಯನ್ನು ಪರ್ಯಾಯ ಮಾರ್ಗದಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ ಎಂದು ಗುರುವಾರ ಸುಪ್ರಿಂಕೋರ್ಟ್ ಗೆ ಹೇಳಿಕೆ ನೀಡಿದೆ.

ಕೇಂದ್ರ ಸರ್ಕಾರ ದ್ವಂದ್ವ ನಿಲುವು ಇದೇ ಮೊದಲ ಬಾರಿ ಏನಲ್ಲ. ರಾಮನೂ ಇಲ್ಲ, ರಾಮಾಯಣವೂ ಇಲ್ಲ ಎಂದು ಸುಪ್ರಿಂಕೋರ್ಟ್ ಗೆ ಅಫಿಡ್ ವಿಟ್ ಸಲ್ಲಿಸಿ ಎಲ್ಲರ ಆಕ್ರೋಶಕ್ಕೆ ಗುರಿಯಾಗಿತ್ತು. ವಿವಾದ ಭುಗಿಲೆದ್ದ ಪರಿಣಾಮ ಅಫಿಡವಿಟ್ ನ್ನು ಹಿಂದಕ್ಕೆ ತಗೆದುಕೊಂಡಿತ್ತು. ಈ ಮಧ್ಯೆ ರಾಮನೇ ಸೇತುವೆಯನ್ನು ಧ್ವಂಸಗೊಳಿಸಿದ್ದಾನೆ ಎಂದು ಮತ್ತೊಂದು ಅಫಿಡವಿಟ್ ನ್ನು ಸಲ್ಲಿಸಿತ್ತು, ಇದಕ್ಕೆ ಭಾರತೀಯ ಜನತಾ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮತ್ತೆ ಕೇಂದ್ರ ಸರ್ಕಾರ ರಾಗ ಬದಲಿಸಿದೆ.

ಕೇಂದ್ರ ಸರ್ಕಾರ ಗುರುವಾರ ಸುಪ್ರಿಂಕೋರ್ಟ್ ಗೆ ನೀಡಿದ ಸರ್ಕಾರದ ವಕೀಲ ಫಾಲಿ ನಾರಿಮನ್, ಪರ್ಯಾಯ ಮಾರ್ಗದಲ್ಲಿ ಸೇತು ಸಮುದ್ರಂ ಯೋಜನೆ ಸಾಧ್ಯವೇ ಎಂಬುದರ ಬಗ್ಗೆ ಅತ್ಯುನ್ನತ ಮಟ್ಟದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜೆ.ಬಾಲಕೃಷ್ಣನ್ ಅವರಿದ್ದ ನ್ಯಾಯಪೀಠದ ಮುಂದೆ ಹೇಳಿದ್ದಾರೆ. ಬುಧವಾರ ನ್ಯಾಯಪೀಠ ಸಲಹೆ ನೀಡಿದಂತೆ, ಪರ್ಯಾಯ ಮಾರ್ಗದಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ನಾರಿಮನ್ ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟರು.

(ದಟ್ಸ್ ಕನ್ನಡ ವಾರ್ತೆ)

ರಾಮಸೇತು ಧ್ವಂಸ ಮಾಡಿದ್ದು ಸಾಕ್ಷಾತ್ ಶ್ರೀರಾಮ
ಕೇಂದ್ರದಿಂದ ಹಿಂದುಗಳ ಭಾವನೆಗೆ ಕೊಡಲಿಯೇಟು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X