ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೆಲುವು ಶತಸಿದ್ಧ : ‘ಸಿದ್ದು’ ಬೆನ್ನಿಗೆ ಅಂಬರೀಷ್ ಶ್ರೀರಕ್ಷೆ
ಬೆಂಗಳೂರು : ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರ ಗೆಲುವು ಶತಸಿದ್ಧ. ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವ ಅಂಬರೀಷ್ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಮಂಗಳವಾರ ಮಾತನಾಡುತ್ತಿದ್ದ ಅವರು, ಜೆಡಿಎಸ್-ಬಿಜೆಪಿ ಜೊತೆಯಾದರೂ ಸಹಾ, ಮತದಾರರು ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸವಿಟ್ಟಿದ್ದಾರೆ. ಅವರು ಉತ್ತಮ ಅಭ್ಯರ್ಥಿ ಎಂಬ ಅರಿವು ಜನರಲ್ಲಿದೆ ಎಂದರು.
ಅಂಬರೀಷ್
ಮಾತಿನ
ಸಾರಾಂಶ
:
- ಮಂತ್ರಿ ಸ್ಥಾನ ನೀಡಿದ ಸೋನಿಯಾ ಗಾಂಧಿಗೆ ಧನ್ಯವಾದ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಬಲಪಡಿಸುತ್ತೇನೆ.
- ಕನ್ನಡ ಸಿನಿಮಾ ಬಿಕ್ಕಟ್ಟು ಬಗೆಹರಿಸಲು ಪ್ರಮಾಣಿಕ ಪ್ರಯತ್ನ, ಈ ಸಮಸ್ಯೆಯನ್ನು ಡಿಸೆಂಬರ್ ಮೊದಲ ವಾರದೊಳಗೆ ಇತ್ಯರ್ಥಗೊಳಿಸುತ್ತೇನೆ.
- 2000 ವರ್ಷಗಳ ಇತಿಹಾಸ ಹೊಂದಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲೇ ಬೇಕು. ಈ ನಿಟ್ಟಿನಲ್ಲಿ ನನ್ನದೂ ಧ್ವನಿ ಸೇರಿಸುವೆ.
Comments
Story first published: Tuesday, November 14, 2006, 23:53 [IST]