Get Updates
Get notified of breaking news, exclusive insights, and must-see stories!

ಡೈಲಿಹಂಟ್ ಮಾತೃಸಂಸ್ಥೆ 'ವರ್ಸ್ ಇನ್ನೋವೇಶನ್' ಆಡಳಿತ ಮಂಡಳಿಗೆ ಪಿ.ಆರ್. ರಮೇಶ್ ನೇಮಕ: ಆಡಳಿತಕ್ಕೆ ಹೊಸ ಬಲ

ಬೆಂಗಳೂರು: ಭಾರತದ ಪ್ರಮುಖ ಎಐ-ಚಾಲಿತ ಸ್ಥಳೀಯ ಭಾಷಾ ತಂತ್ರಜ್ಞಾನ ಪ್ಲಾಟ್‌ಫಾರ್ಮ್ ಮತ್ತು ಜನಪ್ರಿಯ ಆ್ಯಪ್‌ಗಳಾದ ಡೈಲಿಹಂಟ್, ಜೋಶ್, ಮ್ಯಾಗ್‌ಝ್ಟರ್ (Magzter) ಹಾಗೂ ನೆಕ್ಸವರ್ಸ್.ಎಐ (NexVerse.ai) ನ ಮಾತೃಸಂಸ್ಥೆಯಾಗಿರುವ 'ವರ್ಸ್ ಇನ್ನೋವೇಶನ್' (VerSe Innovation) ಮಂಗಳವಾರ ಮಹತ್ವದ ಪ್ರಕಟಣೆ ಹೊರಡಿಸಿದೆ. ತನ್ನ ಆಡಳಿತ ಮಂಡಳಿಯ ನೂತನ ಸ್ವತಂತ್ರ ನಿರ್ದೇಶಕರಾಗಿ ಡೆಲಾಯ್ಟ್ ಇಂಡಿಯಾದ ಮಾಜಿ ಅಧ್ಯಕ್ಷ ಪಿ.ಆರ್. ರಮೇಶ್ ಅವರನ್ನು ಅಧಿಕೃತವಾಗಿ ನೇಮಕ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಜೊತೆಗೆ, ಅವರು ಕಂಪನಿಯ ಲೆಕ್ಕಪರಿಶೋಧನಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ವರ್ಸ್ ಇನ್ನೋವೇಶನ್ ತನ್ನ ಸಾಂಸ್ಥಿಕ ಮತ್ತು ಕಾರ್ಯತಂತ್ರದ ಬೆಳವಣಿಗೆಯ ಮುಂದಿನ ಹಂತದತ್ತ ಹೆಜ್ಜೆ ಇಡುತ್ತಿದ್ದು, ಈ ನಿರ್ಣಾಯಕ ಘಟ್ಟದಲ್ಲಿ ಕಂಪನಿಯ ಕಾರ್ಪೊರೇಟ್ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಪ್ರಮುಖ ನೇಮಕಾತಿಯನ್ನು ಮಾಡಲಾಗಿದೆ.

VerSe Innovation

ಪಿ.ಆರ್. ರಮೇಶ್ ಯಾರು? ಅವರ ಹಿನ್ನೆಲೆ ಏನು?

ಪಿ.ಆರ್. ರಮೇಶ್ ಅವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಹಣಕಾಸು ಮೇಲ್ವಿಚಾರಣೆ, ಕಾರ್ಪೊರೇಟ್ ಆಡಳಿತ, ನಿಯಂತ್ರಕ ಸಲಹೆ ಮತ್ತು ಬೋರ್ಡ್ ನಾಯಕತ್ವದಲ್ಲಿ ಬರೋಬ್ಬರಿ 40 ವರ್ಷಗಳ ಸುದೀರ್ಘ ಹಾಗೂ ಅಪಾರ ಅನುಭವವನ್ನು ಹೊಂದಿದ್ದಾರೆ. ಅವರು ಪ್ರತಿಷ್ಠಿತ ಡೆಲಾಯ್ಟ್ ಇಂಡಿಯಾ (Deloitte India) ಸಂಸ್ಥೆಯ ಮಾಜಿ ಅಧ್ಯಕ್ಷರಾಗಿ ಹಾಗೂ ಡೆಲಾಯ್ಟ್ ಗ್ಲೋಬಲ್ ಬೋರ್ಡ್‌ನ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ತಮ್ಮ ವೃತ್ತಿಜೀವನದ ಅವಧಿಯಲ್ಲಿ, ಭಾರತದ ಪ್ರಮುಖ ದೇಶೀಯ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗೆ (MNCs) ಆಡಳಿತ, ಅಪಾಯ ನಿರ್ವಹಣೆ, ಹಣಕಾಸು ವರದಿ ಮಾನದಂಡಗಳು ಮತ್ತು ನಿಯಂತ್ರಕ ಅನುಸರಣೆಯ ಕುರಿತು ಅವರು ಮಾರ್ಗದರ್ಶನ ನೀಡಿದ್ದಾರೆ.

ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ

ಸದ್ಯ ಅವರು ಏರ್ ಇಂಡಿಯಾ, ಸಿಪ್ಲಾ, ನೆಸ್ಲೆ ಇಂಡಿಯಾ, ಲಾರ್ಸೆನ್ ಅಂಡ್ ಟರ್ಬೊ (L&T), ಕ್ರಾಮ್ಟನ್ ಗ್ರೀವ್ಸ್, ಐಟಿಸಿ ಹೋಟೆಲ್ಸ್, ಸೈಂಟ್ (Cyient), ತೇಜಸ್ ನೆಟ್‌ವರ್ಕ್ಸ್ ಮತ್ತು ಎಚ್‌ಡಿಎಫ್‌ಸಿ (HDFC) ಸೇರಿದಂತೆ ಹಲವು ಪ್ರಮುಖ ಪಟ್ಟಿಮಾಡಲಾದ ಮತ್ತು ಪಟ್ಟಿಮಾಡದ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಏಷ್ಯನ್ ಸೆಂಟರ್ ಫಾರ್ ಕಾರ್ಪೊರೇಟ್ ಗವರ್ನೆನ್ಸ್ ಅಂಡ್ ಸಸ್ಟೈನಬಿಲಿಟಿ ಸಂಸ್ಥೆಯು 2022-23ನೇ ಸಾಲಿನ 'ಅತ್ಯುತ್ತಮ ಸ್ವತಂತ್ರ ನಿರ್ದೇಶಕ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಲ್ಲದೆ, ಸೆಬಿ (SEBI), ಆರ್‌ಬಿಐ ಮತ್ತು ಐಆರ್‌ಡಿಎ ನಂತಹ ಪ್ರಮುಖ ನಿಯಂತ್ರಣ ಸಂಸ್ಥೆಗಳ ಸಲಹಾ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಭಾರತದಲ್ಲಿ ಆಡಳಿತ ಮತ್ತು ಹಣಕಾಸು ಮಾನದಂಡಗಳ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವರ್ಸ್ ಇನ್ನೋವೇಶನ್ ಸಹ-ಸಂಸ್ಥಾಪಕರ ಪ್ರತಿಕ್ರಿಯೆ

ಈ ನೇಮಕಾತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ವರ್ಸ್ ಇನ್ನೋವೇಶನ್‌ನ ಸಹ-ಸಂಸ್ಥಾಪಕ ಉಮಂಗ್ ಬೇಡಿ, ಯಾವುದೇ ಒಂದು ಕಂಪೆನಿಯು ದೀರ್ಘಕಾಲದವರೆಗೆ ಯಶಸ್ವಿಯಾಗಿ ಮುನ್ನಡೆಸಲು ಬಲವಾದ ಆಡಳಿತ ಮತ್ತು ಹಣಕಾಸಿನ ಶಿಸ್ತು ಅತ್ಯಂತ ಮೂಲಭೂತ ಅಂಶಗಳಾಗಿವೆ. ಪಿ.ಆರ್‌ ರಮೇಶ್‌ ಅವರು ಬೋರ್ಡ್‌ ಉಸ್ತುವಾರಿ, ನಿಯಂತ್ರಣ ಚೌಕಟ್ಟುಗಳು ಮತ್ತು ಜಾಗತಿಕ ಲೆಕ್ಕಪರಿಶೋಧನಾ ನಾಯಕತ್ವದಲ್ಲಿ ಸಾಟಿಯಿಲ್ಲದ ಅನುಭವವನ್ನು ಹೊಂದಿದ್ದಾರೆ. ವರ್ಸ್ ಇನ್ನೋವೇಶನ್ ಸುಸ್ಥಿರ ಬೆಳವಣಿಗೆಯತ್ತ ಗಮನಹರಿಸುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಆಡಳಿತದ ಮಾನದಂಡಗಳನ್ನು ಬಲಪಡಿಸಲು ಮತ್ತು ಪಾಲುದಾರರ ವಿಶ್ವಾಸವನ್ನು ಹೆಚ್ಚಿಸಲು ಅವರ ಮಾರ್ಗದರ್ಶನವು ಪ್ರಮುಖ ಸಾಧನವಾಗಲಿದೆ," ಎಂದು ಹೇಳಿದ್ದಾರೆ.

VerSe Innovation

ಹೊಸ ಜವಾಬ್ದಾರಿ ಬಗ್ಗೆ ಪಿ.ಆರ್. ರಮೇಶ್ ಮಾತು

ತಮ್ಮ ಹೊಸ ಜವಾಬ್ದಾರಿಯ ಕುರಿತು ಮಾತನಾಡಿದ ಪಿ.ಆರ್. ರಮೇಶ್, "ಭಾರತದ ಡಿಜಿಟಲ್ ಲೋಕದಲ್ಲಿ ವರ್ಸ್ ಇನ್ನೋವೇಶನ್ ಒಂದು ದೊಡ್ಡ ಪ್ರಮಾಣದ ವ್ಯವಹಾರವನ್ನು ಹುಟ್ಟುಹಾಕಿದೆ. ಈ ಬೃಹತ್ ಬೆಳವಣಿಗೆಯ ಜೊತೆಗೆ ಆಡಳಿತ ವ್ಯವಸ್ಥೆಗಳು, ಹಣಕಾಸಿನ ನಿಯಂತ್ರಣಗಳು ಮತ್ತು ಅಪಾಯದ ಮೇಲ್ವಿಚಾರಣೆಯ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಬಲವಾದ ಸಂಸ್ಥೆಗಳು ಕೇವಲ ನಾವೀನ್ಯತೆಯ ಆಧಾರದ ಮೇಲೆ ಮಾತ್ರವಲ್ಲ, ಶಿಸ್ತು ಮತ್ತು ಹೊಣೆಗಾರಿಕೆಯ ಮೇಲೂ ನಿರ್ಮಿಸಲ್ಪಡುತ್ತವೆ. ಈ ತತ್ವಗಳನ್ನು ಮತ್ತಷ್ಟು ಅಳವಡಿಸಲು ಮತ್ತು ಸುಸ್ಥಿರ ಹಾಗೂ ಜವಾಬ್ದಾರಿಯುತ ಬೆಳವಣಿಗೆಯನ್ನು ಬೆಂಬಲಿಸುವ ಆಡಳಿತ ಚೌಕಟ್ಟನ್ನು ರೂಪಿಸಲು ನಾನು ಕಂಪನಿಯ ಆಡಳಿತ ಮಂಡಳಿ ಮತ್ತು ಮ್ಯಾನೇಜ್ಮೆಂಟ್ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ," ಎಂದು ತಿಳಿಸಿದರು.

ವರ್ಸ್ ಇನ್ನೋವೇಶನ್ ಮುಂದಿರುವ ಹಾದಿ

ವರ್ಸ್ ಇನ್ನೋವೇಶನ್‌ನಲ್ಲಿ, ರಮೇಶ್ ಅವರು ಲೆಕ್ಕಪರಿಶೋಧನಾ ಸಮಿತಿಯ ಅಧ್ಯಕ್ಷರಾಗಿ ಹಣಕಾಸು ವರದಿಗಳ ಸಮಗ್ರತೆ, ಆಂತರಿಕ ನಿಯಂತ್ರಣಗಳು, ಎಂಟರ್‌ಪ್ರೈಸ್ ರಿಸ್ಕ್ ಮ್ಯಾನೇಜ್ಮೆಂಟ್, ನಿಯಂತ್ರಕ ಅನುಸರಣೆ ಮತ್ತು ಲೆಕ್ಕಪರಿಶೋಧನಾ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ತಂತ್ರಜ್ಞಾನದ ಮೂಲಕ ಡಿಜಿಟಲ್ ಕಂದಕವನ್ನು ಬೆಸೆಯುವ ಉದ್ದೇಶದಿಂದ ಆರಂಭವಾದ ವರ್ಸ್ ಇನ್ನೋವೇಶನ್, ಇಂದು ಸ್ಥಳೀಯ ಭಾಷೆಗಳಲ್ಲಿ ಲಕ್ಷಾಂತರ ಗ್ರಾಹಕರಿಗೆ ಕಂಟೆಂಟ್ ಒದಗಿಸುತ್ತಿದೆ.

Vijay Thalapathi: ಟಿವಿಕೆ ಸಂಸ್ಥಾಪಕ, ನಟ ವಿಜಯ್ ದಳಪತಿ ವಿರುದ್ಧ ಪ್ರಕರಣ ದಾಖಲು
Vijay Thalapathi: ಟಿವಿಕೆ ಸಂಸ್ಥಾಪಕ, ನಟ ವಿಜಯ್ ದಳಪತಿ ವಿರುದ್ಧ ಪ್ರಕರಣ ದಾಖಲು

ಗೂಗಲ್, ಮೈಕ್ರೋಸಾಫ್ಟ್, ಸಿಕ್ವೊಯಾ ಕ್ಯಾಪಿಟಲ್ (Sequoia Capital), ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿಯಂತಹ (QIA) ಜಾಗತಿಕ ಹೂಡಿಕೆದಾರರ ಭಾರಿ ಬೆಂಬಲ ಹೊಂದಿರುವ ಈ ಕಂಪನಿಯು ಭಾರತದ ಮೊದಲ 'ಸ್ಥಳೀಯ ಭಾಷಾ ಟೆಕ್ ಯೂನಿಕಾರ್ನ್' (First tech unicorn for local languages) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಿ.ಆರ್. ರಮೇಶ್ ಅವರಂತಹ ದಿಗ್ಗಜರ ನೇಮಕಾತಿಯು ಕಂಪನಿಯ ದೀರ್ಘಕಾಲೀನ ಮೌಲ್ಯ ಸೃಷ್ಟಿ ಮತ್ತು ಕಾರ್ಯಾಚರಣೆಯ ಶಿಸ್ತನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+