ಎಲ್ಲ ರಾಜ್ಯಗಳಲ್ಲೂ ಮೇಲ್ಮನೆ ರಚಿಸಿ : ಕೇಂದ್ರಕ್ಕೆ ಒತ್ತಾಯ
ಎಲ್ಲ ರಾಜ್ಯಗಳಲ್ಲೂ ಮೇಲ್ಮನೆ ರಚಿಸಿ : ಕೇಂದ್ರಕ್ಕೆ ಒತ್ತಾಯ
ನವದೆಹಲಿಗೆ ಶೀಘ್ರದಲ್ಲಿಯೇ ನಿಯೋಗ, ರಾಷ್ಟ್ರಪತಿ, ಪ್ರಧಾನಿ ಜೊತೆ ಮಾತುಕತೆ
ಮೇಲ್ಮನೆ ರಚನೆ ವಿಷಯಕ್ಕೆ ಸಂಬಂಧಿಸಿದಂತೆ ನವದೆಹಲಿಗೆ ತೆರಳಿ, ಸಂಬಂಧಿಸಿದವರ ಗಮನ ಸೆಳೆಯಲು ಬುಧವಾರ ವಿಧಾನಪರಿಷತ್ತು ನಿರ್ಣಯ ಅಂಗೀಕರಿಸಿತು.
ಸದನ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಹೊರಟ್ಟಿ, ಶೀಘ್ರದಲ್ಲಿಯೇ ನವದೆಹಲಿಗೆ ನಿಯೋಗ ಕರೆದೊಯ್ಯುವ ಬಗ್ಗೆ ಭರವಸೆ ನೀಡಿದರು.
ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಎಚ್.ಕೆ.ಪಾಟೀಲ್ ಮಂಗಳವಾರ ಈ ನಿರ್ಣಯಕ್ಕಾಗಿ ಒತ್ತಾಯಿಸಿದ್ದರು. ಆಡಳಿತ ಯಂತ್ರದ ಪರಿಣಾಮಕಾರಿ ಬಳಕೆಗೆ ಮೇಲ್ಮನೆ ಪೂರಕವಾಗಲಿದೆ ಎಂಬ ವಾದವನ್ನು ಅವರು ಮುಂದಿಟ್ಟಿದ್ದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು











Click it and Unblock the Notifications