ಹೈಕೋಟ್ ಸಂಚಾರಿ ಪೀಠ ಸ್ಥಾಪನೆಗೆ ಸ್ಥಳ ಪರಿಶೀಲನೆ
ಹೈಕೋಟ್
ಸಂಚಾರಿ
ಪೀಠ
ಸ್ಥಾಪನೆಗೆ
ಸ್ಥಳ
ಪರಿಶೀಲನೆ
ಉತ್ತರ
ಕರ್ನಾಟಕದಲ್ಲಿ
ಸಂಚಾರಿ
ಪೀಠಕ್ಕಾಗಿ
20ಕೋಟಿ
ಮೀಸಲಿಡಲಾಗಿದೆ
-ಬಸವರಾಜ
ಹೊರಟ್ಟಿ
ನಗರದಿಂದ 10 ಕಿ.ಮೀ.ದೂರವಿರುವ ಭೂ ಮತ್ತು ಜಲ ನಿರ್ವಹಣಾ ಸಂಸ್ಥೆಯ ಕಟ್ಟಡವನ್ನು ಈ ಸಂದರ್ಭದಲ್ಲಿ ವೀಕ್ಷಿಸಲಾಯಿತು. ನಿಯೋಗವು ಸ್ಥಳ ಪರಿಶೀಲನೆಗಾಗಿ ಗುಲ್ಬರ್ಗ ನಗರಕ್ಕೂ ತೆರಳುವ ಕಾರ್ಯಕ್ರಮವಿದೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಮೂರ್ತಿ ನಾಯಕ್ ಅವರು, ಸದ್ಯಕ್ಕೆ ಈ ಕಟ್ಟಡವನ್ನು ನಮಗೆ ತೋರಿಸಲಾಗಿದೆ. ಈಗಲೇ ಈ ಕುರಿತು ಏನನ್ನೂ ಹೇಳಲಾರೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಣ್ಣ ಉಳಿತಾಯ, ಲಾಟರಿ ಮತ್ತು ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವ ಬಸವರಾಜ ಹೊರಟ್ಟಿ , ಸಂಚಾರಿ ಪೀಠಕ್ಕೆ 11ಸಭಾಂಗಣಗಳ ಅಗತ್ಯವಿದೆ. ಈ ಸ್ಥಳವನ್ನು ನಿಯೋಗವು ಶಿಫಾರಸು ಮಾಡಿದರೆ ಸರ್ಕಾವು ಎಲ್ಲ ಸೌಲಭ್ಯಗಳನ್ನೂ ಒದಗಿಸಲಿದೆ ಎಂದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಸಂಚಾರಿ ಪೀಠಕ್ಕಾಗಿಯೇ 20ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹೆಚ್ಚಿನ ನೆರವು ಅಗತ್ಯವೆನಿಸಿದರೆ ನೀಡುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್ ಭರವಸೆ ನೀಡಿದ್ದಾರೆ ಎಂದು ಹೊರಟ್ಟಿ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು