ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷಾ ವಿಜ್ಞಾನಿ ಕುಶಾಲಪ್ಪ ಗೌಡರಿಗೆ ಮುಳಿಯ ಪ್ರಶಸ್ತಿ

By Staff
|
Google Oneindia Kannada News

ಭಾಷಾ ವಿಜ್ಞಾನಿ ಕುಶಾಲಪ್ಪ ಗೌಡರಿಗೆ ಮುಳಿಯ ಪ್ರಶಸ್ತಿ
ಕನ್ನಡ ವ್ಯಾಕರಣ ಮತ್ತು ಭಾಷಾ ಚರಿತ್ರೆಯಲ್ಲಿನ ಸಾಹಿತ್ಯಕೃಷಿಗೆ ಈ ಗೌರವ ಸಂದಿದೆ

ಮಂಗಳೂರು : ಭಾಷಾ ವಿಜ್ಞಾನಿ ಡಾ. ಕೆ. ಕುಶಾಲಪ್ಪ ಗೌಡ ಅವರ ಸೇವೆಗೆ ಪ್ರಸಕ್ತ ಸಾಲಿನ ಮುಳಿಯ ತಿಮ್ಮಪ್ಪಯ್ಯಪ್ರಶಸ್ತಿ ಸಂದಿದೆ.

ಕನ್ನಡ ವ್ಯಾಕರಣ ಹಾಗೂ ಭಾಷಾ ಚರಿತ್ರೆಗೆ ಸಂಬಂಧಿಸಿದಂತೆ ಕುಶಾಲಪ್ಪ ಅಪಾರ ಕೃಷಿ ಮಾಡಿದ್ದಾರೆ. ಮಾ.8ರಂದು ಕಣ್ಣೂರಿನಲ್ಲಿ ನಡೆವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಅವರು ಸ್ವೀಕರಿಸುವರು.

ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು(ಸಂಪಾದಿತ ಕೃತಿ) ಹಾಗೂ ಕನ್ನಡ ಭಾಷಾವಲೋಕನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿದೆ. ಗೌಡ ಕನ್ನಡ(ಇಂಗ್ಲಿಷ್‌), ಎ ಗ್ರಾಮರ್‌ ಆಫ್‌ ಕನ್ನಡ (ಇಂಗ್ಲಿಷ್‌) ಕಡಲತಡಿಯ ಕನವರಿಕೆ, ಬೆಟ್ಟದ ಮೇಲೊಂದು ಮನೆಯ ಮಾಡಿ ಮತ್ತಿತರ ಕೃತಿಗಳಿಂದ ಸಾಹಿತ್ಯವಲಯದಲ್ಲಿ ಕುಶಾಲಪ್ಪ ಪರಿಚಿತರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X