ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂತಕದ ಹೊತ್ತು ಹೊಸ ವರ್ಷದ ಆಚರಣೆ ಬೇಡ -ಧರ್ಮಸಿಂಗ್‌ ಕರೆ

By Staff
|
Google Oneindia Kannada News

ಸೂತಕದ ಹೊತ್ತು ಹೊಸ ವರ್ಷದ ಆಚರಣೆ ಬೇಡ -ಧರ್ಮಸಿಂಗ್‌ ಕರೆ
ಸಾವಿನ ಮನೆಯಲ್ಲಿ ಹೊಸವರ್ಷ ಸ್ವಾಗತಿಸುವುದು ಅರ್ಥಹೀನ-ಅನಂತಮೂರ್ತಿ

ಬೆಂಗಳೂರು: ಹೊಸವರ್ಷದ ಆಚರಣೆಯ ಮೇಲೆ ಸುನಾಮಿ ಕರಿನೆರಳು ಕಾಡುತ್ತಿದೆ. ಸುನಾಮಿ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌, ತಮ್ಮ ಹೊಸವರ್ಷ ಆಚರಣೆಯ ಕಾರ್ಯಕ್ರಮಗಳನ್ನು ರದ್ದು ಪಡಿಸಿದ್ದಾರೆ.

ರಾಜ್ಯದಲ್ಲಿ ಹೊಸವರ್ಷ ಸ್ವಾಗತಿಸುವ ಸಂಭ್ರಮಕ್ಕೆ ಇದು ಸೂಕ್ತ ಸಂದರ್ಭವಲ್ಲ. ರಾಜ್ಯದ ಜನರು ಅನಗತ್ಯ ದುಂದುವೆಚ್ಚಕ್ಕೆ ಮುಂದಾಗದೇ, ಮಾನವೀಯ ದೃಷ್ಟಿಯಿಂದ ಸುನಾಮಿ ಸಂತ್ರಸ್ತರಿಗೆ ನೆರವು ನೀಡಬೇಕೆಂದು ಅವರು ಕೋರಿದ್ದಾರೆ.

ವಿಶ್ವದೆಲ್ಲೆಡೆ ಸಾವಿನ ತಲ್ಲಣ ತುಂಬಿಕೊಂಡಿದೆ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಸಾವಿರಾರು ಜನ ಬಲಿಯಾಗಿದ್ದಾರೆ.

ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ರಾಷ್ಟ್ರೀಯ ದುರಂತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್‌, ಸರಕಾರಿ ಪ್ರಾಯೋಜಿತ ಅಥವಾ ಖಾಸಗಿ ಹೊಸವರ್ಷದ ಕಾರ್ಯಕ್ರಮಗಳನ್ನು ಮತ್ತು ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿಯ ಬೆಳ್ಳಿಹಬ್ಬ ಆಚರಣೆ ಕಾರ್ಯಕ್ರಮವನ್ನು ಗುರುವಾರ ರದ್ದುಪಡಿಸಿದರು.

ಮನವಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್‌. ಅನಂತಮೂರ್ತಿ ಸೇರಿದಂತೆ ಪ್ರಜ್ಞಾವಂತ ವಲಯ ಹೊಸವರ್ಷ ಆಚರಣೆಯನ್ನು ವಿರೋಧಿಸಿ, ಸಂತ್ರಸ್ತರಿಗೆ ನೆರವಾಗಲು ಕರೆ ನೀಡಿದೆ. ರಾಜಧಾನಿ ನಗರದ ಬಹುದೇಕ ಹೋಟೆಲ್‌, ಬಾರ್‌, ರೆಸ್ಟೋರೆಂಟ್‌, ರೆಸಾರ್ಟ್‌ಗಳು ಹೊಸವರ್ಷದ ಆಚರಣೆಯನ್ನು ಕೈಬಿಟ್ಟಿವೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X