ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೆಸ್‌ಕ್ಲಬ್‌ ವರ್ಷದ ವ್ಯಕ್ತಿಗಳಾಗಿ ಅನಿಲ್‌ ಕುಂಬ್ಳೆ ಮತ್ತು ವೆಂಕಟಾಚಲ

By Staff
|
Google Oneindia Kannada News

ಪ್ರೆಸ್‌ಕ್ಲಬ್‌ ವರ್ಷದ ವ್ಯಕ್ತಿಗಳಾಗಿ ಅನಿಲ್‌ ಕುಂಬ್ಳೆ ಮತ್ತು ವೆಂಕಟಾಚಲ
ವಿಶ್ವೇಶ್ವರಭಟ್‌, ಕೆ.ಚಂದ್ರನಾಥ ಆಚಾರ್ಯಗೆ ಬೆಂಗಳೂರು ಪ್ರೆಸ್‌ಕ್ಲಬ್‌ ಪ್ರಶಸ್ತಿ

ಬೆಂಗಳೂರು : ಬೆಂಗಳೂರು ಪ್ರೆಸ್‌ಕ್ಲಬ್‌ ಆರಂಭಿಸಿರುವ ‘ವರ್ಷದ ವ್ಯಕ್ತಿ’ ಗೌರವಕ್ಕೆ ಕ್ರಿಕೆಟ್‌ಪಟು ಅನಿಲ್‌ಕುಂಬ್ಳೆ ಮತ್ತು ಲೋಕಾಯುಕ್ತ ಎನ್‌.ವೆಂಕಟಾಚಲ ಜಂಟಿಯಾಗಿ ಆಯ್ಕೆಯಾಗಿದ್ದಾರೆ.

ವಿವಿಧ ಕ್ಷೇತ್ರಗಳ 35 ಗಣ್ಯರನ್ನು ಪ್ರಶಸ್ತಿ ಪಟ್ಟಿಯಲ್ಲಿ ಗುರ್ತಿಸಲಾಗಿತ್ತು. ಅಂತಿಮವಾಗಿ ಪ್ರೆಸ್‌ಕ್ಲಬ್‌ನ ಸದಸ್ಯರು ಸಮ ಮತಗಳನ್ನು ನೀಡಿ ಈ ಇಬ್ಬರನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಪ್ರೆಸ್‌ಕ್ಲಬ್‌ ಪ್ರಶಸ್ತಿ : ಪ್ರಸಕ್ತ ವರ್ಷದಿಂದ ನೀಡಲು ಉದ್ದೇಶಿಸಲಾಗಿರುವ ಬೆಂಗಳೂರು ಪ್ರೆಸ್‌ಕ್ಲಬ್‌ ಪ್ರಶಸ್ತಿ ವಿಶ್ವೇಶ್ವರಭಟ್‌(ಪತ್ರಿಕೋದ್ಯಮ) ಮತ್ತು ಕೆ.ಚಂದ್ರನಾಥ ಆಚಾರ್ಯ(ವ್ಯಂಗ್ಯಚಿತ್ರ) ಅವರಿಗೆ ಸಂದಿದೆ.

ನೆರವು : ಬೆಂಗಳೂರು ಪ್ರೆಸ್‌ ಕ್ಲಬ್‌ ಮುಖ್ಯಮಂತ್ರಿಗಳ ಸುನಾಮಿ ಪರಿಹಾರ ನಿಧಿಗೆ 25,000ರೂ. ದೇಣಿಗೆ ನೀಡಲು ನಿರ್ಧರಿಸಿದೆ.

ದುರಂತದಲ್ಲಿ ಸಾವಿರಾರು ಜನರು ಬಲಿಯಾಗಿರುವ ಹಿನ್ನೆಲೆಯಲ್ಲಿ ಹೊಸ ವರ್ಷ ಸ್ವಾಗತಿಸುವ ಸಮಾರಂಭವನ್ನು ರದ್ದುಪಡಿಸಿದೆ. ಡಿ.31ರಂದು ಹಮ್ಮಿಕೊಳ್ಳಲಾಗಿದ್ದ ಪ್ರೆಸ್‌ಕ್ಲಬ್‌ ಪ್ರಶಸ್ತಿ ಮತ್ತು ವರ್ಷದ ವ್ಯಕ್ತಿ ಪ್ರಶಸ್ತಿ ವಿತರಣಾ ಸಮಾರಂಭವನ್ನು ಜನವರಿ 15ಕ್ಕೆ ಮುಂದೂಡಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X