ಪ್ರೆಸ್ಕ್ಲಬ್ ವರ್ಷದ ವ್ಯಕ್ತಿಗಳಾಗಿ ಅನಿಲ್ ಕುಂಬ್ಳೆ ಮತ್ತು ವೆಂಕಟಾಚಲ
ಪ್ರೆಸ್ಕ್ಲಬ್
ವರ್ಷದ
ವ್ಯಕ್ತಿಗಳಾಗಿ
ಅನಿಲ್
ಕುಂಬ್ಳೆ
ಮತ್ತು
ವೆಂಕಟಾಚಲ
ವಿಶ್ವೇಶ್ವರಭಟ್,
ಕೆ.ಚಂದ್ರನಾಥ
ಆಚಾರ್ಯಗೆ
ಬೆಂಗಳೂರು
ಪ್ರೆಸ್ಕ್ಲಬ್
ಪ್ರಶಸ್ತಿ
ವಿವಿಧ ಕ್ಷೇತ್ರಗಳ 35 ಗಣ್ಯರನ್ನು ಪ್ರಶಸ್ತಿ ಪಟ್ಟಿಯಲ್ಲಿ ಗುರ್ತಿಸಲಾಗಿತ್ತು. ಅಂತಿಮವಾಗಿ ಪ್ರೆಸ್ಕ್ಲಬ್ನ ಸದಸ್ಯರು ಸಮ ಮತಗಳನ್ನು ನೀಡಿ ಈ ಇಬ್ಬರನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಪ್ರೆಸ್ಕ್ಲಬ್ ಪ್ರಶಸ್ತಿ : ಪ್ರಸಕ್ತ ವರ್ಷದಿಂದ ನೀಡಲು ಉದ್ದೇಶಿಸಲಾಗಿರುವ ಬೆಂಗಳೂರು ಪ್ರೆಸ್ಕ್ಲಬ್ ಪ್ರಶಸ್ತಿ ವಿಶ್ವೇಶ್ವರಭಟ್(ಪತ್ರಿಕೋದ್ಯಮ) ಮತ್ತು ಕೆ.ಚಂದ್ರನಾಥ ಆಚಾರ್ಯ(ವ್ಯಂಗ್ಯಚಿತ್ರ) ಅವರಿಗೆ ಸಂದಿದೆ.
ನೆರವು : ಬೆಂಗಳೂರು ಪ್ರೆಸ್ ಕ್ಲಬ್ ಮುಖ್ಯಮಂತ್ರಿಗಳ ಸುನಾಮಿ ಪರಿಹಾರ ನಿಧಿಗೆ 25,000ರೂ. ದೇಣಿಗೆ ನೀಡಲು ನಿರ್ಧರಿಸಿದೆ.
ದುರಂತದಲ್ಲಿ ಸಾವಿರಾರು ಜನರು ಬಲಿಯಾಗಿರುವ ಹಿನ್ನೆಲೆಯಲ್ಲಿ ಹೊಸ ವರ್ಷ ಸ್ವಾಗತಿಸುವ ಸಮಾರಂಭವನ್ನು ರದ್ದುಪಡಿಸಿದೆ. ಡಿ.31ರಂದು ಹಮ್ಮಿಕೊಳ್ಳಲಾಗಿದ್ದ ಪ್ರೆಸ್ಕ್ಲಬ್ ಪ್ರಶಸ್ತಿ ಮತ್ತು ವರ್ಷದ ವ್ಯಕ್ತಿ ಪ್ರಶಸ್ತಿ ವಿತರಣಾ ಸಮಾರಂಭವನ್ನು ಜನವರಿ 15ಕ್ಕೆ ಮುಂದೂಡಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು