ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಗಾರಿಕೆಗಳ ಬೆಳವಣಿಗೆ ಹೆಸರಲ್ಲಿ ವಂಚನೆ- ಹೆಚ್‌.ಡಿ.ದೇವೇಗೌಡ ಕಿಡಿ

By Staff
|
Google Oneindia Kannada News

ಕೈಗಾರಿಕೆಗಳ ಬೆಳವಣಿಗೆ ಹೆಸರಲ್ಲಿ ವಂಚನೆ- ಹೆಚ್‌.ಡಿ.ದೇವೇಗೌಡ ಕಿಡಿ
ಕಳೆದ ಆರುವರ್ಷಗಳಲ್ಲಿನ ಅಭಿವೃದ್ಧಿ ಪರಿಶೀಲನೆಗೆ ಕಾರ್ಯಪಡೆ ರಚಿಸಲು ಒತ್ತಾಯ

ಬೆಂಗಳೂರು: ರಾಜ್ಯದಲ್ಲಿನ ಆರ್ಥಿಕ ಬೆಳವಣಿಗೆಯ ಸ್ಪಷ್ಟ ಚಿತ್ರಣ ಯಾರಲ್ಲೂ ಇಲ್ಲ. ಕಳೆದ ಆರು ವರ್ಷಗಳಲ್ಲಿ ಬೆಂಗಳೂರು ಸುತ್ತಮುತ್ತ ನಡೆದಿರುವ ಕೈಗಾರಿಕಾ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಕೊಳೆಗೇರಿಗಳಿಗೆ ನಿವೇಶನ ಹಂಚಿಕೆ ಬಗ್ಗೆ ಪರಿಶೀಲಿಸಲು ಕಾರ್ಯಪಡೆ ರಚಿಸುವಂತೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಆಗ್ರಹಿಸಿದರು.

ನಗರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಆರ್ಥಿಕ ಬೆಳವಣಿಗೆಗೆ ನಾನು ಅಡ್ಡಿಪಡಿಸುತ್ತಿಲ್ಲ. ಬೇಕಾದರೆ ಮುಖ್ಯಮಂತ್ರಿಗಳು ಕೈಗಾರಿಕೆಗಳ ಮೂಲಭೂತ ಸೌಕರ್ಯಕ್ಕೆ 1000 ಕೋಟಿ ರೂಪಾಯಿ ಯೋಜನೆ ರೂಪಿಸಿದರೂ ನನ್ನ ವಿರೋಧವಿಲ್ಲ. ಇದರಿಂದ ಹಳ್ಳಿ ಜನರಿಗೆ ನಾಲ್ಕು ದಿನ ತೊಂದರೆ ಆದರೂ ಪರವಾಗಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.

ಒಬ್ಬ ವ್ಯಕ್ತಿ ಅಥವಾ ವರ್ಗವನ್ನು ಸಂತೈಸಲು ನಾನು ರಾಜಕಾರಣ ಮಾಡುವುದಿಲ್ಲ. ದೆಹಲಿಯ ನಾಯಕರಿಂದ ಅಥವಾ ಮಾಧ್ಯಮಗಳಿಂದ ಹೊಗಳಿಸಿಕೊಳ್ಳುವ ರಾಜಕೀಯ ನನಗೆ ಬೇಡ. ಕೈಗಾರಿಕಾ ಬೆಳವಣಿಗೆ ಹೆಸರಲ್ಲಿ, ಬಡಾವಣೆಗಳ ನಿರ್ಮಾಣದ ನೆಪದಲ್ಲಿ ವಂಚನೆ ನಡೆದಿದೆ ಎಂದರು.

ಬಡವರ ಜಮೀನನ್ನು ಎಕರೆಗೆ 7-8 ಲಕ್ಷ ನೀಡಿ ಖರೀದಿಸಿ, ನಂತರ ಅದನ್ನು ಕೋಟ್ಯಾಂತರ ರೂ.ಗಳಿಗೆ ಮಾರಾಟ ಮಾಡುವುದು ಆರ್ಥಿಕ ಬೆಳವಣಿಗೆಯೇ ಎಂದು ಪ್ರಶ್ನಿಸಿದ ದೇವೇಗೌಡರು, ಬಡವರ ನಿರ್ಲಕ್ಷ್ಯಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X