ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಗುರಿದ ಬಾಬಾಬುಡನ್‌ಗಿರಿ ವಿವಾದ-ನೂರಾರು ಮಂದಿಯ ಬಂಧನ

By Staff
|
Google Oneindia Kannada News

ಚಿಗುರಿದ ಬಾಬಾಬುಡನ್‌ಗಿರಿ ವಿವಾದ-ನೂರಾರು ಮಂದಿಯ ಬಂಧನ
ಎಂದಿನಂತೆ ಶೋಭಾಯಾತ್ರೆಯನ್ನು ನಡೆಸಿಯೇ ತೀರುತ್ತೇವೆ-ಯಡಿಯೂರಪ್ಪ

ಬೆಂಗಳೂರು : ಮುಂಜಾಗ್ರತೆ ಕ್ರಮವಾಗಿ ಶುಕ್ರವಾರ ಸುಮಾರು 100 ಮಂದಿಯನ್ನು ಪೋಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ. ಜಿಲ್ಲೆಯ ಬಾಬಾಬುಡನ್‌ಗಿರಿ ಬೆಟ್ಟದಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ಪೋಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಸಂಘ ಪರಿವಾರ ಮತ್ತು ಬಿಜೆಪಿ ಶೋಭಾಯಾತ್ರೆಯನ್ನು ನಡೆಸಲು ಉದ್ದೇಶಿಸಿರುವುದರಿಂದ, ಬಿಗಿ ಪೋಲೀಸು ಬಂದೋಬಸ್ತು ಹಾಕಲಾಗಿದೆ. ಜಿಲ್ಲಾಡಳಿತ ಸೆಕ್ಷನ್‌144ರನ್ವಯ ನಿಷೇಧಾಜ್ಞೆಯನ್ನು ಡಿ.26ರವರೆಗೆ ಇಲ್ಲಿ ಜಾರಿಗೆ ತಂದಿದೆ. ವಿವಾದಿತ ಪ್ರದೇಶದಲ್ಲಿ ಶೋಭಾಯಾತ್ರೆ ಸೇರಿದಂತೆ ಮತ್ತಿತರ ಪೂಜಾವಿಧಿಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಿದ್ದು, 1975ರ ಹಿಂದಿದ್ದ ಪೂಜಾವಿಧಿಗಳಿಗೆ ಮಾತ್ರ ಹೈಕೋರ್ಟ್‌ ಆದೇಶದಂತೆ ಅನುಮತಿ ನೀಡಲಾಗಿದೆ.

ಅನುಮತಿ ನೀಡಿ : ಸರಕಾರದ ನಿಷೇಧವಿದ್ದರು ಬಿಜೆಪಿ ಮತ್ತು ಸಂಘ ಪರಿವಾರ, ದತ್ತಜಯಂತಿ ಮತ್ತು ಶೋಭಾಯಾತ್ರೆ ನಡೆಸಲು ಮುಂದಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಬಿ.ಎಸ್‌. ಯಡಿಯೂರಪ್ಪ , ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ರಾಜ್ಯ ಸರಕಾರ ವೋಟ್‌ಬ್ಯಾಂಕ್‌ ರಾಜಕಾರಣವನ್ನು ಮಾಡುತ್ತಿದೆ. ಇಲ್ಲಿ ಶೋಭಾಯಾತ್ರೆಯನ್ನು ನಡೆಸಿಯೇ ತೀರುತ್ತೇವೆ. ಯಾತ್ರೆಯ ಹಿನ್ನೆಲೆ ಎಲ್ಲ ಬಿಜೆಪಿ ಶಾಸಕರು ಶನಿವಾರ ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X