ವೆಂಕಟಾಚಲರಿಗೆ ಕಡಿವಾಣ; ಉಪಲೋಕಾಯುಕ್ತರಾಗಿ ಬಸವನಗೌಡ

ವೆಂಕಟಾಚಲರಿಗೆ ಕಡಿವಾಣ; ಉಪಲೋಕಾಯುಕ್ತರಾಗಿ ಬಸವನಗೌಡ
ಹೆಚ್ಚಿನ ಅಧಿಕಾರ ಕೋರಿದರೆ, ಇರುವ ಅಧಿಕಾರ ಮೊಟಕುಗೊಳಿಸಿದ ಧರ್ಮಸಿಂಗ್‌

ಬೆಂಗಳೂರು : ಉಪ ಲೋಕಾಯುಕ್ತ ಹುದ್ದೆಗೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಿ.ಪತ್ರಿ ಬಸವನಗೌಡ ಅವರನ್ನು ಸರಕಾರ ನೇಮಕ ಮಾಡಿದೆ. ಇದರಿಂದಾಗಿ ಭ್ರಷ್ಟ ಸರಕಾರಿ ನೌಕರರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಎನ್‌.ವೆಂಕಟಾಚಲರಿಗೆ ‘ಧರ್ಮ’ ಸರಕಾರ ಅಪರೋಕ್ಷವಾಗಿ ಕಡಿವಾಣ ಹಾಕಿದಂತಾಗಿದೆ.

ಬಹು ವರ್ಷಗಳಿಂದ ಖಾಲಿ ಇದ್ದ ಹುದ್ದೆಯನ್ನು ತುಂಬಿ ಲೋಕಾಯುಕ್ತವನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಬಸವನಗೌಡರ ನೇಮಕವನ್ನು ಸರಕಾರ ಸಮರ್ಥಿಸಿಕೊಂಡಿದೆ.

ಭ್ರಷ್ಟತೆಯ ವಿರುದ್ಧ ಸಮರ ಸಾರಿದ್ದ ವೆಂಕಾಚಲ ಲೋಕಾಯುಕ್ತಕ್ಕೆ ಮತ್ತಷ್ಟು ಅಧಿಕಾರ ನೀಡುವಂತೆ ಸರಕಾರವನ್ನು ಕೋರಿದ್ದರು. ಆದರೆ ಸರಕಾರ ವ್ಯತಿರಿಕ್ತವಾಗಿ ಸ್ಪಂದಿಸಿ ಅವರ ಅಧಿಕಾರವನ್ನು ಮೊಟಕು ಗೊಳಿಸಲಾಗಿದೆ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ವೆಂಕಟಾಚಲ ಈಗ ಪವರ್‌ಲೆಸ್‌ ಚೀಫ್‌ ಆಗಿದ್ದಾರೆ. ಸರಕಾರಿ ಕಚೇರಿಗಳ ಮೇಲೆ ದಾಳಿ, ತಪಾಸಣೆ, ನೌಕರರ ನೇರ ವಿಚಾರಣೆ, ಸರಕಾರಕ್ಕೆ ಭ್ರಷ್ಟತೆಯ ಬಗ್ಗೆ ವರದಿ ಮಾಡುವುದು ಮತ್ತಿತರ ಅಧಿಕಾರದಿಂದ ವಂಚಿತರಾಗಿದ್ದಾರೆ.

ಅತೃಪ್ತಿ ಇಲ್ಲ : ಉಪ ಲೋಕಾಯುಕ್ತರ ನೇಮಕದಿಂದ ನನ್ನ ಕೆಲಸ ಹಗುರವಾಗಿದೆ. ಅಲ್ಲದೇ ಭ್ರಷ್ಟತೆಯ ವಿರುದ್ಧದ ನನ್ನ ಸಮರಕ್ಕೆ ಬಸವನಗೌಡ ಮತ್ತಷ್ಟು ಬಲ ತುಂಬಲಿದ್ದಾರೆ ಎಂದು ಲೋಕಾಯುಕ್ತ ವೆಂಕಟಾಚಲ ಪ್ರತಿಕ್ರಿಯಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+