ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಿನೈವರು ಜಾನಪದ ಕಲಾವಿದರಿಗೆ ಕನ್ನಡ ಸಾಹಿತ್ಯಪರಿಷತ್‌ ಮನ್ನಣೆ

By Staff
|
Google Oneindia Kannada News

ನಾಡಿನೈವರು ಜಾನಪದ ಕಲಾವಿದರಿಗೆ ಕನ್ನಡ ಸಾಹಿತ್ಯಪರಿಷತ್‌ ಮನ್ನಣೆ
ಚನ್ನೇಗೌಡ, ಕಲ್ಯಾಣಮ್ಮ ಸೇರಿದಂತೆ ಐವರಿಗೆ ತಾಯಮ್ಮ ಮತ್ತು ಮಲ್ಲಯ್ಯ ಪ್ರಶಸ್ತಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರಸಕ್ತ ಸಾಲಿನಲ್ಲಿ ತಾಯಮ್ಮ ಮತ್ತು ಎಸ್‌.ಸಿ.ಮಲ್ಲಯ್ಯ ಜಾನಪದ ಕಲಾವಿದರ ಪ್ರಶಸ್ತಿಗೆ ನಾಡಿನ ಐದು ಮಂದಿ ಜಾನಪದ ಕಲಾವಿದರನ್ನು ಆಯ್ಕೆ ಮಾಡಿದೆ.

ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರನ್ನು ಗುರ್ತಿಸಿ ಪ್ರೋತ್ಸಾಹಿಸುವುದು ಪ್ರಶಸ್ತಿಯ ಆಶಯ. ಈ ಪ್ರಶಸ್ತಿಗೆ ಹಿಂದಲತ್ತಿ ಚನ್ನೇಗೌಡ, ಕಲ್ಯಾಣಮ್ಮ, ಕದಿರಯ್ಯ, ಮುದುಕವ್ವ ಪೂಜಾರಿ, ತಾರಾಬಾಯಿ ದೊಡ್ಡಿ ಪಾತ್ರರಾಗಿದ್ದಾರೆ.

ಮೂರು ಸಾವಿರ ರೂ.ಗಳ ನಗದು ಹಣವನ್ನು ಪ್ರಶಸ್ತಿ ಒಳಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತುನೊಂದಿಗೆ ಕೈಜೋಡಿಸಿರುವ ವಿಧಾನ ಪರಿಷತ್ತು ಸದಸ್ಯ ಎಸ್‌.ಎಂ.ಶಂಕರ್‌(ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರ ಅವರ ಸಹೋದರ) ತಮ್ಮ ತಂದೆ-ತಾಯಿಯ ಹೆಸರಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X