ನನ್ನನ್ನು ಹೈಜಾಕ್ ಮಾಡಲು ಯಾರಿಗೂ ಸಾಧ್ಯವಿಲ್ಲ -ಧರ್ಮಸಿಂಗ್
ನನ್ನನ್ನು
ಹೈಜಾಕ್
ಮಾಡಲು
ಯಾರಿಗೂ
ಸಾಧ್ಯವಿಲ್ಲ
-ಧರ್ಮಸಿಂಗ್
ಶಿವಕುಮಾರ್
ಹೇಳಿಕೆಯಿಂದ
ಸರ್ಕಾರಕ್ಕೆ
ಅಪಾಯವಿಲ್ಲ
ಮುಖ್ಯಮಂತ್ರಿ ಧರ್ಮಸಿಂಗ್ರನ್ನು ಜಾತ್ಯತೀತ ಜನತಾದಳದ ಮುಖಂಡ ಎಚ್.ಡಿ.ದೇವೇಗೌಡ ಹೈಜಾಕ್ ಮಾಡದಂತೆ ಕಾವಲು ಕಾಯುತ್ತೇವೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಯ ಬೆನ್ನಿಗೇ ಮುಖ್ಯಮಂತ್ರಿ ಧರ್ಮಸಿಂಗ್ ಈ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾಶ್ಮೀರಿ ಪಂಡಿತರ ಜಾಗತಿಕ ಸಮ್ಮೇಳನವನ್ನು ಡಿ. 19ರಂದು ಉದ್ಘಾಟಿಸಿ ಮಾತನಾಡಿದ ಧರ್ಮಸಿಂಗ್, ಸರ್ಕಾರವನ್ನು ಹೈಜಾಕ್ ಮಾಡಲೂ ಯಾರಿಂದಲೂ ಸಾಧ್ಯವಿಲ್ಲ , ರಾಜಕೀಯದಲ್ಲಿ ತಮಗೆ ಮೂವತ್ತು ವರ್ಷಗಳ ಅನುಭವವಿದೆ ಎಂದರು.
ಸಮ್ಮಿಶ್ರ ಸರ್ಕಾರವನ್ನು ಐದು ವರ್ಷಗಳ ಕಾಲ ಮುನ್ನಡೆಸಲು ತಾವೊಬ್ಬ ಒಮ್ಮತದ ಹುದ್ದರಿ ಎಂದು ಬಣ್ಣಿಸಿಕೊಂಡ ಧರ್ಮಸಿಂಗ್, ಶಿವಕುಮಾರ್ ಹೇಳಿಕೆಯಿಂದ ಸರ್ಕಾರಕ್ಕೆ ಯಾವುದೇ ಹಾನಿಯಿಲ್ಲ ಎಂದು ಅಭಿಪ್ರಾಯಪಟ್ಟರು.
ಸಂಪುಟದಲ್ಲಿ ಸ್ಥಾನ ದೊರೆಯದ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ದೇವೇಗೌಡ ಸರ್ಕಾರವನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ