ವಿದ್ಯಾರ್ಥಿ ಆತ್ಮಹತ್ಯೆ: ಪಿಯುಸಿ ಪರೀಕ್ಷೆ ಪಾಸಾಗದ ಬದುಕಿಗೆ ನಮಸ್ಕಾರ
ವಿದ್ಯಾರ್ಥಿ ಆತ್ಮಹತ್ಯೆ: ಪಿಯುಸಿ ಪರೀಕ್ಷೆ ಪಾಸಾಗದ ಬದುಕಿಗೆ ನಮಸ್ಕಾರ
ಸಾವಿಗೊಂದು ಕಾರಣ ಸಿಗುವಂತೆ, ಬದುಕಿಗೊಂದು ಕಾರಣ ನಿಮ್ಮ ಮುಂದೆ ಕಾಣುತ್ತಿಲ್ಲವೇ?
ಪ್ರಶಾಂತ್ನಗರದ ಪೃಥ್ವಿ ಕಾಮತ್(18) ಎರಡು ಸಲ ಪಿಯೂಸಿಯಲ್ಲಿ ನಪಾಸಾಗಿದ್ದ. ಇಷ್ಟೇ...ಇದೊಂದೇ ಆತ್ಮಹತ್ಯೆಗೆ ಕಾರಣವಾಗಿದೆ. ಕೆಎಲ್ಇ ಕಾಲೇಜಿನ ವಿದ್ಯಾರ್ಥಿಯಾದ ಈತನಿಗೆ, ಮೊನ್ನೆ ಬಂದ ಸಪ್ಲಿಮೆಂಟರಿ ಪರೀಕ್ಷೆಯ ಫಲಿತಾಂಶ ವ್ಯತಿರಿಕ್ತವಾಗಿತ್ತು. ಅನುತ್ತೀರ್ಣನಾಗುವುದು ಅವಮಾನದ ಸಂಗತಿ ಎಂದು ಅವನಿಗೆ ಅವನೇ ಹೇಳಿಕೊಂಡಿದ್ದಾನೆ.
ನೋವು, ನಿರಾಸೆ, ಆತಂಕದಲ್ಲಿದ್ದ ಪೃಥ್ವಿಕಾಮತ್ಗೆ ಪೃಥ್ವಿಯೇ ಚಿಕ್ಕದಾಗಿ ಕಾಣಿಸಿದೆ. ಬುಧವಾರ ರಾತ್ರಿ ಎಲ್ಲ ಮನಸ್ಸಿನಲ್ಲಿ ಹತ್ತಾರು ಯೋಚನೆಗಳು ಸುಳಿದಾಡಿವೆ. ಬದುಕು ಅರ್ಥಹೀನ ಅನ್ನಿಸಿದೆ. ಗುರುವಾರ(ಡಿ.16) ಬೆಳಿಗ್ಗೆ ಮೇಲೆ ನೋಡಿದಾಗ ಮುಕ್ತಿ ನೀಡುವಂತೆ ಸೀಲಿಂಗ್ ಫ್ಯಾನ್ ಕಾಣಿಸಿದೆ. ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದ ಪೃಥ್ವಿ, ಬೆಳಿಗ್ಗೆ 8 ಗಂಟೆ ಸುಮಾರಿನಲ್ಲಿ ಸಾವಿನ ಮನೆಯನ್ನು ಪ್ರವೇಶಿಸಿದ್ದಾನೆ. ಮತ್ತೆ ವಾಪಸು ಬರಲು ಬಹುಶಃ ಪ್ರಯತ್ನಿಸಿದ್ದರೂ ಫಲಕಾರಿಯಾಗಿಲ್ಲ !
ಪರೀಕ್ಷೆಯನ್ನಷ್ಟೇ ಬದುಕೆಂದು ಕೊಳ್ಳುವ, ಪೃಥ್ವಿಕಾಮತ್ ಅಂತವರಿಗೆ ಬದುಕಿನ ಅಗಾಧತೆಯನ್ನು ಹೇಳುವವರು ಯಾರು? ಸಾವಿಗೊಂದು ಕಾರಣ ಸಿಗುವಂತೆ, ಬದುಕಿಗೊಂದು ಕಾರಣವನ್ನು ಹುಡುಕಿಕೊಳ್ಳ ಬೇಕು. ಈ ಆತ್ಯಹತ್ಯೆಯ ಸಾವಿನ ಬಗ್ಗೆ ಕನಿಕರ ಪಡಬೇಕೋ ? ಶೋಕಿಸಬೇಕೋ ? ನೀವೇ ಹೇಳಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications