ಸಚಿವನಾಗದ ಕುರಿತು ನನಗೆ ಏನೇನೂ ಬೇಸರವಿಲ್ಲ-ಪಟೇಲ್ ಪುತ್ರ
ಸಚಿವನಾಗದ
ಕುರಿತು
ನನಗೆ
ಏನೇನೂ
ಬೇಸರವಿಲ್ಲ-ಪಟೇಲ್
ಪುತ್ರ
ಜಾತ್ಯತೀತ
ದಳದಲ್ಲಿ
ಮಹಿಮಾ
ಪಟೇಲ್
ಮೂಲೆಗುಂಪು?
ಸಂಪುಟದಲ್ಲಿ ಸ್ಥಾನ ದೊರೆಯದ ಕುರಿತು ನಾನು ನಿರಾಶನಾಗಿಲ್ಲ . ಈ ಕುರಿತು ದೇವೇಗೌಡ ಸೇರಿದಂತೆ ಯಾರನ್ನೂ ದೂರುವುದಿಲ್ಲಿ ಎಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಹಿಮಾ ಪಟೇಲ್ ತಿಳಿಸಿದ್ದಾರೆ.
ಕಾನೂನಿನ ಪ್ರಕಾರ ಮಂತ್ರಿಮಂಡಲ ಗಾತ್ರಕ್ಕೆ ಕಡಿವಾಣವಿದೆ. ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರವನ್ನು ಬ್ಯಾಲೆನ್ಸ್ ಮಾಡುವುದು ಅಗತ್ಯವಾಗಿದೆ. ಸರ್ಕಾರದ ಹಿತಾಸಕ್ತಿಗೆ ಯಾವುದು ಅಗತ್ಯವೋ ಆ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮಹಿಮಾ ಪಟೇಲ್ ಹೇಳಿದರು. ಆದರೆ ತಮಗೆ ಸಚಿವ ಸ್ಥಾನ ದೊರೆತಿದ್ದರೆ ಕ್ಷೇತ್ರದ ಅಭಿವೃದ್ಧಿಗೆ ನೆರವಾಗುತ್ತಿತ್ತು ಎಂದು ಹೇಳುವುದನ್ನು ಮಹಿಮಾ ಪಟೇಲ್ ಮರೆಯಲಿಲ್ಲ .
ಚುನಾವಣೆಗೆ ಮುನ್ನ ಈ-ಟೀವಿ ಸಂದರ್ಶನದಲ್ಲಿ ಜಾತ್ಯತೀತ ಜನತಾದಳ ಪಕ್ಷದಲ್ಲಿ ತಮಗಿರುವ ಹಿಡಿತದ ಕುರಿತು ಮಹಿಮಾ ಪಟೇಲ್ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಆದರೆ ಚುನಾವಣಾ ನಂತರ ಮಹಿಮಾ ಪಟೇಲ್ರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ಅವರ ಅಭಿಮಾನಿಗಳು ದೂರುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು