ಡಿ.17ರಂದು ಕಂಚಿಶ್ರೀ ಬಂಧ ಮುಕ್ತಿಯ ಅರ್ಜಿ ವಿಚಾರಣೆ-ಸು.ಕೋರ್ಟ್
ಡಿ.17ರಂದು ಕಂಚಿಶ್ರೀ ಬಂಧ ಮುಕ್ತಿಯ ಅರ್ಜಿ ವಿಚಾರಣೆ-ಸು.ಕೋರ್ಟ್
ಜೈಲಲ್ಲಿರುವ ಕಂಚಿಶ್ರೀಗಳ ನೋಡಲು ವೆಲ್ಲೂರಿಗೆ ಎನ್ಡಿಎ ನಿಯೋಗ
ಶ್ರೀಗಳ ಪರವಾಗಿ ಹಿರಿಯ ವಕೀಲ ಎಸ್.ಎಸ್.ನಾರಿಮನ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ(ಡಿ.15) ಪರಿಶೀಲಿಸಿದ, ಆರ್.ಸಿ.ಲಾಹೋಟಿ ನೇತೃತ್ವದ ತ್ರಿಸದಸ್ಯ ಪೀಠ ಶುಕ್ರವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಜಾಮೀನು ಅರ್ಜಿಯನ್ನು ಡಿ.8 ರಂದು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ, ಕಂಚಿಶ್ರೀಗಳು ಸುಪ್ರಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನವೆಂಬರ್ 11 ರಿಂದ ಶ್ರೀಗಳು ಪೋಲೀಸ್ ಬಂಧನದಲ್ಲಿದ್ದಾರೆ.
ಶ್ರೀಗಳಿಗೆ ಜಾಮೀನು ಕೋರಿ ಹಾಗೂ ಪ್ರಕರಣವನ್ನು ತಮಿಳುನಾಡು ಪೋಲೀಸರಿಂದ, ಸಿಬಿಐಗೆ ಹಸ್ತಾಂತರಿಸ ಬೇಕೆಂದು ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿತ್ತು.
ಎನ್ಡಿಎ ಭೇಟಿ: ವೆಲ್ಲೂರು ಜೈಲಿನಲ್ಲಿರುವ ಶ್ರೀಗಳನ್ನು ಭೇಟಿಯಾಗಲು ಆರು ಸದಸ್ಯರ ಎನ್ಡಿಎ ನಿಯೋಗಕ್ಕೆ ತಮಿಳುನಾಡು ಸರಕಾರ ಅನುಮತಿ ನೀಡಿದೆ. ಬಿಜೆಪಿಯ ಬಲಬೀರ್ ಸಿಂಗ್ ಪುಂಜ್, ರಾಸಾ ಸಿಂಗ್ ರಾವತ್, ಜಯಬೆಹನ್ ತಾಕ್ಕರ್, ಶಿವಸೇನೆಯ ಚಂದ್ರಕಾಂತ್ ಖರೆ, ಬಿಜು ಜನತಾದಳದ ಬಿ.ಜೆ. ಪಾಂಡ, ತೃಣಮೂಲ ಕಾಂಗ್ರೆಸ್ನ ದಿನೇಶ್ ತ್ರಿವೇದಿ ನಿಯೋಗದಲ್ಲಿದ್ದಾರೆ.
ಎನ್ಡಿಎ ನಿಯೋಗವು ಇದೇ ಸಂದರ್ಭದಲ್ಲಿ ಕಾಂಚೀಪುರಂನ ಕಿರಿಯ ಆಚಾರ್ಯ ವಿಜಯೇಂದ್ರ ಸರಸ್ವತಿಯವರನ್ನು ಸಹ ಭೇಟಿ ಮಾಡಲಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications