ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತ್ತಲಲ್ಲಿ ಕಂಚಿಶ್ರೀ - ಸುಪ್ರಿಂಕೋರ್ಟ್‌ನಿಂದ ಜಾಮೀನು ಅರ್ಜಿ ವಜಾ

By Staff
|
Google Oneindia Kannada News

ಕತ್ತಲಲ್ಲಿ ಕಂಚಿಶ್ರೀ - ಸುಪ್ರಿಂಕೋರ್ಟ್‌ನಿಂದ ಜಾಮೀನು ಅರ್ಜಿ ವಜಾ
ಶಂಕರರಾಮನ್‌ ಹತ್ಯೆ ಪ್ರಕರಣವನ್ನು ಪೋಲೀಸರಿಂದ ಸಿಬಿಐಗೆ ಒಪ್ಪಿಸಲು ನಕಾರ

ನವದೆಹಲಿ: ಕಂಚಿ ಶ್ರೀಗಳಿಗೆ ಸದ್ಯಕ್ಕೆ ನ್ಯಾಯಾಂಗ ಬಂಧನದಿಂದ ಮೋಕ್ಷವಿಲ್ಲ. ಕಂಚಿಶ್ರೀ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರ ಜಾಮೀನು ಅರ್ಜಿಯನ್ನು ಮಂಗಳವಾರ(ಡಿ.14) ಸುಪ್ರಿಂಕೋರ್ಟ್‌ ವಜಾ ಮಾಡಿದೆ.

ಶಂಕರರಾಮನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಹಾಗೂ ಈ ಪ್ರಕರಣದ ತನಿಖೆಯನ್ನು ತಮಿಳುನಾಡು ಪೋಲೀಸರಿಂದ ಸಿಬಿಐಗೆ ಹಸ್ತಾಂತರಿಸಬೇಕೆಂದು ಅರ್ಜಿಯನ್ನು ಶ್ರೀಗಳು ಸಲ್ಲಿಸಿದ್ದರು. ಕೋರಿಕೆಯ ಎರಡು ಅರ್ಜಿಗಳನ್ನು ಸಹ, ಸುಪ್ರಿಂಕೋರ್ಟ್‌ ತಳ್ಳಿಹಾಕಿದೆ.

ಶಂಕರರಾಮನ್‌ ಹತ್ಯೆ ಮತ್ತು ಮತ್ತೊಂದು ಪ್ರಕರಣದಲ್ಲಿ ಹಲ್ಲೆಯ ಆರೋಪದ ಮೇಲೆ ಬಂಧಿತರಾಗಿರುವ ಕಂಚಿ ಶ್ರೀಗಳಿಗೆ ಜಾಮೀನು ನೀಡಲು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X