ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೃತ್ಯಕಲಾಪರಿಷತ್‌ಬೆಳ್ಳಿಹಬ್ಬಪ್ರಯುಕ್ತ ಡಿ.15ರಿಂದ ‘ನೃತ್ಯಸಮ್ಮೇಳನ’

By Staff
|
Google Oneindia Kannada News

ನೃತ್ಯಕಲಾಪರಿಷತ್‌ಬೆಳ್ಳಿಹಬ್ಬಪ್ರಯುಕ್ತ ಡಿ.15ರಿಂದ ‘ನೃತ್ಯಸಮ್ಮೇಳನ’
ಸಮ್ಮೇನಾಧ್ಯಕ್ಷೆ ಜಯಲಕ್ಷ್ಮೀ ಆಳ್ವರಿಗೆ ‘ನೃತ್ಯಕಲಾ ಶಿರೋಮಣಿ’ ಬಿರುದು

ಬೆಂಗಳೂರು : ಕರ್ನಾಟಕ ನೃತ್ಯ ಕಲಾ ಪರಿಷತ್‌ನ ಬೆಳ್ಳಿ ಹಬ್ಬದ ಪ್ರಯುಕ್ತ ಡಿ.15, 16 ಮತ್ತು 17 ರಂದು ನಗರದ ಗಾಯನ ಸಮಾಜದಲ್ಲಿ ‘ಅಖಿಲ ಕರ್ನಾಟಕ ನೃತ್ಯ ಸಮ್ಮೇಳನ’ ಜರುಗಲಿದೆ.

ಈ ರಜತ ಮಹೋತ್ಸವದ ಸಂದರ್ಭದಲ್ಲಿ ವಿಚಾರ ಸಂಕಿರಣ, ನೃತ್ಯ, ಪ್ರಾತ್ಯಕ್ಷಿಕೆ ನಡೆಯಲಿದೆ. ವಿವಿಧ ನೃತ್ಯ ಕಲಾವಿದರಿಂದ ಭರತನಾಟ್ಯ, ಕೂಚಿಪುಡಿ, ಮೋಹಿನಿ ಆಟ್ಟಂ, ಕಥಕ್‌, ಕಥಕ್ಕಳಿ, ಶಾಸ್ತ್ರೀಯ ನೃತ್ಯರೂಪಕ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಪರಿಚಯಿಸಲಾಗುವುದು ಎಂದು ಬೆಳ್ಳಿ ಹಬ್ಬ ನೃತ್ಯ ಸಮ್ಮೇಳನಾ ಸಮಿತಿ ಸದಸ್ಯ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿ ಕೆ.ವಿ.ಆರ್‌. ಠಾಗೂರ್‌, ಪರಿಷತ್‌ ಅಧ್ಯಕ್ಷೆ ಲೀಲಾ ರಾಮನಾಥನ್‌ ಹಾಗೂ ನೃತ್ಯ ಸಮ್ಮೇಳನ ಸದಸ್ಯ ಪದ್ಮಜಾ ಶ್ರೀನಿವಾಸ್‌ ತಿಳಿಸಿದ್ದಾರೆ.

ನೃತ್ಯ ಸಮ್ಮೇಳನದಲ್ಲಿ ಹಿರಿಯ ನೃತ್ಯ ಗುರು ಜಯಲಕ್ಷ್ಮೀ ಆಳ್ವ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಹ್ವಾನಿಸಲಾಗುವುದು ಮತ್ತು ಅವರಿಗೆ ‘ನೃತ್ಯಕಲಾ ಶಿರೋಮಣಿ’ ಬಿರುದು ನೀಡಿ ಸನ್ಮಾನಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X