ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಘವೇಂದ್ರಪಾಟೀಲ-ಶ್ರೀಧರ ಬಳಿಗಾರ್‌ಗೆ ವರ್ಧಮಾನ ಪ್ರಶಸ್ತಿ

By Staff
|
Google Oneindia Kannada News

ರಾಘವೇಂದ್ರಪಾಟೀಲ-ಶ್ರೀಧರ ಬಳಿಗಾರ್‌ಗೆ ವರ್ಧಮಾನ ಪ್ರಶಸ್ತಿ
ಮಾಯಿಯ ಮೂರು ಮುಖಗಳು ಹಾಗೂ ಮುಖಾಂತರ ಕೃತಿಗಳಿಗೆ ಸಂದ ಗೌರವ

ಮೂಡುಬಿದಿರೆ : ಕತೆಗಾರ ರಾಘವೇಂದ್ರ ಪಾಟೀಲ ಹಾಗೂ ಶ್ರೀಧರ ಬಳಿಗಾರ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2003ರ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು , ಹಿರಿಯರ ವಿಭಾಗದಲ್ಲಿ ರಾಘವೇಂದ್ರ ಪಾಟೀಲ ಹಾಗೂ ಉದಯೋನ್ಮುಖ ಪ್ರಶಸ್ತಿ ವಿಭಾಗದಲ್ಲಿ ಶ್ರೀಧರ ಬಳಿಗಾರ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

1998ರಲ್ಲಿ ಪ್ರಕಟವಾದ ರಾಘವೇಂದ್ರಪಾಟೀಲರ ‘ಮಾಯಿಯ ಮೂರು ಮುಖಗಳು’ ಕೃತಿಯನ್ನು ಹಾಗೂ ಶ್ರೀಧರ ಬಳಿಗಾರ ಕುಮಟಾ ಅವರ ‘ಮುಖಾಂತರ’ ಕಥಾ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವರ್ಧಮಾನ ಪೀಠದ ಅಧ್ಯಕ್ಷ ಕುಲ್ಯಾಡಿ ಮಾಧವ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X