ಜೆಡಿಎಸ್ ಒಡೆದ ಮನೆ! ಕುಮಾರಸ್ವಾಮಿ ಕೊಡುವರೆ ರಾಜೀನಾಮೆ?
ಜೆಡಿಎಸ್
ಒಡೆದ
ಮನೆ!
ಕುಮಾರಸ್ವಾಮಿ
ಕೊಡುವರೆ
ರಾಜೀನಾಮೆ?
ದೇವೇಗೌಡ,
ಕುಮಾರಸ್ವಾಮಿ
ಬಗೆಗೆ
ಇಬ್ರಾಹಿಂ-ಸುಬ್ಬಯ್ಯ
ಟೀಕೆ
ನನ್ನ ನಡುವಳಿಕೆಯಿಂದ ಜೆಡಿಎಸ್ಗೆ ಹಿನ್ನಡೆಯಾಗಿದ್ದರೆ, ಪಕ್ಷದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ನಾನು ಪಕ್ಷದ ಕಾರ್ಯಾಧ್ಯಕ್ಷನಾಗಬೇಕು ಎಂದು ಆಸೆ ಪಟ್ಟಿರಲಿಲ್ಲ. ನಾಯಕರೇ ನಿರ್ಧರಿಸಿ ಅಧಿಕಾರ ನೀಡಿದರು ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಪಕ್ಷದ ಕೆಲವು ಮುಖಂಡರು, ಅಪ್ಪ-ಮಕ್ಕಳ ಪಕ್ಷ ಎಂದು ಅಪಪ್ರಚಾರ ಮಾಡಿದ್ದಾರೆ. ದುಷ್ಟ ಕೂಟ ಕಟ್ಟುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಜೆಡಿಎಸ್ ಕೇವಲ ನಮ್ಮ ಕುಟುಂಬದ ಪಕ್ಷವಾಗಬಾರದು. ಹೀಗಾಗಿ ಮುಂದಿನ 2-3 ದಿನಗಳಲ್ಲಿ ರಾಜೀನಾಮೆ ಪತ್ರ ಕಳುಹಿಸುತ್ತೇನೆ ಎಂದರು.
ಸಿ.ಎಂ.ಇಬ್ರಾಹಿಂ ಹಾಗೂ ಎ.ಕೆ.ಸುಬ್ಬಯ್ಯ ಪ್ರತ್ಯೇಕ ಸುದ್ದಿಗೋಷ್ಠಿಗಳಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆಯಿದೆ. ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಇಬ್ರಾಹಿಂ ಹೇಳಿದ್ದರು.
ಜೆಡಿಎಸ್ ಸಚಿವರ ಪಟ್ಟಿ ಸಿದ್ಧಪಡಿಸುವ ಹಿನ್ನೆಲೆಯಲ್ಲಿ ದೇವೇಗೌಡರ ನಿವಾಸದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕೂಡ ಕುಮಾರಸ್ವಾಮಿ ಬಗೆಗೆ ಅಸಮಾಧಾನ ವ್ಯಕ್ತವಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು