ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆಗೆ ಡಿ.13 ಗಡುವು ; ಇಲ್ಲದಿದ್ದರೆ ಆಗೋದೇ ಬೇರೆ?

By Staff
|
Google Oneindia Kannada News

ಸಂಪುಟ ವಿಸ್ತರಣೆಗೆ ಡಿ.13 ಗಡುವು ; ಇಲ್ಲದಿದ್ದರೆ ಆಗೋದೇ ಬೇರೆ?
ಕುಮಾರ್‌ಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್‌ ಶಾಸಕರ ರಹಸ್ಯ ಸಮಾಲೋಚನೆ

ಬೆಂಗಳೂರು : ಆರು ತಿಂಗಳಾದರೂ ಸಂಪುಟ ವಿಸ್ತರಣೆಗೆ ಮುಂದಾಗದ ಕಾಂಗ್ರೆಸ್‌ ಬಗೆಗೆ ಜೆಡಿಎಸ್‌ನಲ್ಲಿ ಅತೃಪ್ತಿಯ ಹೊಗೆ ಕಂಡು ಬರುತ್ತಿದೆ. ನಗರದ ಹೊರ ವಲಯದ ರೆಸಾರ್ಟ್‌ನಲ್ಲಿ ಜೆಡಿಎಸ್‌ ಕಾರ್ಯಾಧ್ಯಕ್ಷ ಎಚ್‌.ಡಿ. ಕುಮಾರ್‌ ಸ್ವಾಮಿ ನಾಯಕತ್ವದಲ್ಲಿ, ಪಕ್ಷದ ಶಾಸಕರು ರಹಸ್ಯ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಮೇಲೆ ಒತ್ತಡ ಹಾಕಲು ಯತ್ನಿಸುತ್ತಿರುವ ಜೆಡಿಎಸ್‌, ಡಿ.13 ರಂದೂ ಸಂಪುಟ ವಿಸ್ತರಣೆಯಾಗದಿದ್ದರೆ ಮುಂದಿನ ದಾರಿ ಹಿಡಿಯಲು ತೀರ್ಮಾನಿಸಿದೆ. ಅಲ್ಲಿಯವರೆಗೆ ಕಾದು ನೋಡುವ ನೀತಿ ಅನುಸರಿಸಿರುವ ಜೆಡಿಎಸ್‌ ಶಾಸಕರು, ಬಿಜೆಪಿ ಜೊತೆ ಕೈಜೋಡಿಸುವ ಬಗೆಗೆ ಸಹ ಚಿಂತನೆ ನಡೆಸಿದ್ದಾರೆ. ಯಾರ ಸಂಪರ್ಕಕ್ಕೂ ಸಿಲುಕದೇ ಜೆಡಿಎಸ್‌ ಶಾಸಕರು, ಕುಮಾರ್‌ಸ್ವಾಮಿ ನಾಯಕತ್ವದಲ್ಲಿ ರಹಸ್ಯ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ದೆಹಲಿಯಲ್ಲಿರುವ ಮುಖ್ಯಮಂತ್ರಿ ಧರ್ಮಸಿಂಗ್‌ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.15 ರೊಳಗೆ ಸಂಪುಟ ವಿಸ್ತರಿಸಲಾಗುವುದು. ಕಾಂಗ್ರೆಸ್‌ನಿಂದ ಒಂಬತ್ತು ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಿ, ಎರಡು ಸ್ಥಾನಗಳನ್ನು ಖಾಲಿ ಇಡುವ ಯೋಚನೆ ಇದೆ. ಜೆಡಿಎಸ್‌ನಿಂದ ಹನ್ನೊಂದು ಮಂದಿಗೆ ಸಚಿವ ಸ್ಥಾನ ನೀಡಲಾಗುವುದು ಎಂದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X