ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ಅಭಿವೃದ್ಧಿ:1500 ಕೋಟಿ ಸಾಲಕ್ಕೆವಿಶ್ವಬ್ಯಾಂಕ್‌ಗೆ ರಾಜ್ಯದ ಮೊರೆ

By Staff
|
Google Oneindia Kannada News

ರಸ್ತೆ ಅಭಿವೃದ್ಧಿ:1500 ಕೋಟಿ ಸಾಲಕ್ಕೆವಿಶ್ವಬ್ಯಾಂಕ್‌ಗೆ ರಾಜ್ಯದ ಮೊರೆ
ರಾಜ್ಯದ 27 ಜಿಲ್ಲೆಗಳಲ್ಲಿನ ರಸ್ತೆಗಳ ಮೇಲ್ದರ್ಜೆಗೆ ಯೋಜನೆ

ಬೆಂಗಳೂರು : ರಾಜ್ಯದ ಎಲ್ಲ 27 ಜಿಲ್ಲೆಗಳಲ್ಲಿನ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ವಿಶ್ವಬ್ಯಾಂಕ್‌ನಿಂದ 1500 ಕೋಟಿ ರುಪಾಯಿಗಳ ನೆರವನನು ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ವಿಶ್ವಬ್ಯಾಂಕ್‌ ನೆರವನ್ನು ಪಡೆಯುವ ಮೂಲಕ ರಾಜ್ಯದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ನೆರವನ್ನು ಕೋರುವ ಪ್ರಸ್ತಾವನೆ ಇನ್ನೊಂದು ತಿಂಗಳಲ್ಲಿ ಸಿದ್ಧವಾಗಲಿದ್ದು , ಸಿದ್ಧವಾದ ಕೂಡಲೇ ಪ್ರಸ್ತಾವನೆಯನ್ನು ವಿಶ್ವಬ್ಯಾಂಕ್‌ಗೆ ಕಳುಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ರಸ್ತೆಗಳಿಗೆ ಹಾನಿ ಉಂಟುಮಾಡುತ್ತಿರುವ ಅಧಿಕ ಸರಕು ತುಂಬಿಕೊಂಡಿರುವ ಟ್ರಕ್‌ಗಳ ಹಾವಳಿಯ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಶೀಘ್ರದಲ್ಲಿ ನಡೆಯುವ ಈ ಸಭೆಯಲ್ಲಿ ಸಾರಿಗೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ತಾವು ಭಾಗವಹಿಸುವುದಾಗಿ ರೇವಣ್ಣ ಹೇಳಿದರು.

ಅಧಿಕ ಸರಕು ಸಾಗಣೆಗೆ ಸಂಬಂಧಿಸಿದಂತೆ ಮಂಡ್ಯ, ಬಾಗಲಕೋಟೆ, ತುಮಕೂರು, ಬೆಳಗಾವಿ, ಆಸನ, ಮಂಗಳೂರು, ಕೊಪ್ಪಳ ಜಿಲ್ಲೆಗಳಲ್ಲಿ ಕೆಲವು ಟ್ರಕ್‌ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರೇವಣ್ಣ ಹೇಳಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X