ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಚಿಶ್ರೀಗಳ ಧನುರ್‌ಮಾಸದ ಪೂಜೆಗೆ ಜೈಲಲ್ಲಿ ವ್ಯವಸ್ಥೆ ಕಲ್ಪಿಸಿ-ಉಮಾ

By Staff
|
Google Oneindia Kannada News

ಕಂಚಿಶ್ರೀಗಳ ಧನುರ್‌ಮಾಸದ ಪೂಜೆಗೆ ಜೈಲಲ್ಲಿ ವ್ಯವಸ್ಥೆ ಕಲ್ಪಿಸಿ-ಉಮಾ
ಕಂಚಿ ಪ್ರಕರಣದ ಬಗ್ಗೆ ಸೋನಿಯಾ ಮೌನ ಬಿಡಿಸಲಾಗದ ಒಗಟು

ಕಾಂಚೀಪುರಂ: ಧನುರ್‌ಮಾಸದ ಪೂಜೆಗೆ ಪೂರಕವಾಗುವಂತೆ ಕಂಚಿ ಶ್ರೀಗಳಿಗೆ, ಜೈಲಿನಲ್ಲಿ ಪೂಜಾ ಕಾರ್ಯಕ್ಕೆ ಅಗತ್ಯ ಸೌಲಭ್ಯಗಳ ಕಲ್ಪಿಸುವಂತೆ ತಮಿಳುನಾಡು ಸರಕಾರವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಕೋರಿದ್ದಾರೆ.

ಮಂಗಳವಾರ ವೆಲ್ಲೂರು ಜೈಲಿನಲ್ಲಿರುವ ಶ್ರೀಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧನುರ್‌ ಮಾಸ ಡಿಸೆಂಬರ್‌ ತಿಂಗಳ ಮಧ್ಯದಲ್ಲಿ ಆರಂಭಗೊಳ್ಳುತ್ತಿದೆ. ಹಿಂದುಗಳಿಗೆ ಅದರಲ್ಲೂ ಸನ್ಯಾಸಿಗಳಿಗೆ ಈ ಅವಧಿ ಮಹತ್ವದ್ದಾಗಿದೆ ಎಂದರು.

ರಾಷ್ಟ್ರದಲ್ಲಿ ಕೋಲಾಹಲ ಎಬ್ಬಿಸಿರುವ ಕಂಚಿ ಶ್ರೀಗಳ ಪ್ರಕರಣದ ಬಗೆಗೆ ಕಾಂಗ್ರೆಸ್‌ ಮೌನವಹಿಸಿದೆ. ವಿದೇಶಿ ಮೂಲದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಗೆ, ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳು ಅರ್ಥವಾಗಿಲ್ಲ. ಹೀಗಾಗಿ ಅವರು ಮೌನವಹಿಸಿದ್ದಾರೆ. ಅವರ ಮೌನ ದೊಡ್ಡ ಒಗಟಾಗಿದೆ ಎಂದು ಉಮಾಭಾರತಿ ಹೇಳಿದರು.

ಈ ನಡುವೆ ಕಂಚಿ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಡಿ.10ಕ್ಕೆ ಮುಂದೂಡಲ್ಪಟ್ಟಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X