ಬಾಬಾಬುಡನ್ಗಿರಿಯಲ್ಲಿ ದತ್ತಜಯಂತಿ-ಉರುಸ್ ಆಚರಣೆ ಬಂದ್
ಬಾಬಾಬುಡನ್ಗಿರಿಯಲ್ಲಿ
ದತ್ತಜಯಂತಿ-ಉರುಸ್
ಆಚರಣೆ
ಬಂದ್
ದತ್ತಜಯಂತಿ
ಯಾವುದೇ
ಕಾರಣಕ್ಕೂ
ನಿಲ್ಲದು-ವಿಎಚ್ಪಿ
ರಾಜ್ಯ ಹೈಕೋರ್ಟ್ನ ಆದೇಶದಂತೆ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮುಜರಾಯಿ ಇಲಾಖೆಗೆ ಸೇರಿದ ಸಂಸ್ಥೆಯಾಗಿದ್ದು, 1975ಕ್ಕಿಂತ ಹಿಂದಿನ ವಿಧಿವಿಧಾನಗಳನ್ನು ಆಚರಿಸುವಂತಿಲ್ಲ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ ಕಠಾರಿಯಾ, ಹಿಂದೆ ಆಗಿರುವ ತಪ್ಪುಗಳಿಗೆ ನಾನು ಹೊಣೆಯಲ್ಲ. ಮುಂದಿನ ಹೊಸ ತಪ್ಪುಗಳಿಗೆ ಅವಕಾಶ ನೀಡುವುದಿಲ್ಲ. ಹಿಂದುಗಳಿಗೆ ಮಾತ್ರವಲ್ಲ ಮುಸ್ಲಿಂರಿಗೂ ಈ ಆದೇಶ ಅನ್ವಯಿಸುತ್ತದೆ. ಉರುಸ್ ಮತ್ತು ದತ್ತ ಜಯಂತಿಗೆ ಇನ್ನು ಮುಂದೆ ಅವಕಾಶ ಇಲ್ಲ ಎಂದಿದ್ದಾರೆ.
ಅತೃಪ್ತಿ : ಹೊಸ ಆದೇಶದ ಬಗೆಗೆ ಅತೃಪ್ತಿ ವ್ಯಕ್ತಪಡಿಸಿರುವ ವಿಎಚ್ಪಿ, ಜಿಲ್ಲಾಧಿಕಾರಿಗಳ ನಿರ್ಧಾರ ಗೊಂದಲಕ್ಕೆ ಕಾರಣವಾಗಿದೆ. ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿರುವ ದತ್ತ ಜಯಂತಿ ಉತ್ಸವವನ್ನು ನಡೆಸುವುದಾಗಿ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ