ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ- ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅತೃಪ್ತಿ
ಬಿಜೆಪಿಯಲ್ಲಿ
ಎಲ್ಲವೂ
ಸರಿ
ಇಲ್ಲ-
ಮಾಜಿ
ಮುಖ್ಯಮಂತ್ರಿ
ಬಂಗಾರಪ್ಪ
ಅತೃಪ್ತಿ
ನನಗೆ
ಗೌರವ
ಕೊಡದಿದ್ದರೆ,
ಮುಂದಿನ
ಹಾದಿ
ನೋಡಿಕೊಳ್ಳುತ್ತೇನೆ-
ಬಂಗಾರಪ್ಪ
ರಾಜ್ಯ
ಬಿಜೆಪಿ
ಅಧ್ಯಕ್ಷ
ಸ್ಥಾನ
ದಕ್ಕದಿರುವ
ಬಗೆಗೆ
ಅವರಿಗೆ
ಅಸಮಧಾನವಿದೆ.
ಬಹುದಿನಗಳ
ನಂತರ
ಮೊದಲ
ಬಾರಿಗೆ
ಬಿಜೆಪಿ
ಬಗೆಗೆ
ಬಹಿರಂಗವಾಗಿ
ಅಸಮಾಧಾನ
ವ್ಯಕ್ತಪಡಿಸಿ,
ತೀವ್ರ
ಕುತೂಹಲ
ಕೆರಳಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ
ನಡೆದ
ಸಮಾರಂಭದಲ್ಲಿ
ಬಂಗಾರಪ್ಪ
ಬಿಜೆಪಿ
ಬಿಡುವ
ಬಗೆಗೆ
ಅಪರೋಕ್ಷವಾಗಿ
ಸೂಚಿಸಿದ್ದಾರೆ.
ಆ
ಸಮಾರಂಭದಲ್ಲಿ
ಬಂಗಾರಪ್ಪ
ಹೇಳಿದ್ದು
ಇಷ್ಟು;
- ಅನೇಕ ಕಾರಣಗಳಿಗಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಪ್ರವೇಶಿಸಿದೆ. ವಾಜಪೇಯಿ, ಆಡ್ವಾಣಿ ಬಗ್ಗೆ ಅಪಾರ ಗೌರವವಿದೆ. ನಮ್ಮನ್ನು ಗೌರವದಿಂದ ನಡೆಸಿಕೊಳ್ಳ ಬೇಕಾದ್ದು ಅವರ ಜವಬ್ದಾರಿ.
- ಮಾಜಿ ಮುಖ್ಯಮಂತ್ರಿಯಾಗಿ ಹಾಗೂ ಮೂರು ಬಾರಿ ಸಂಸದನಾಗಿ ಆಯ್ಕೆಯಾದ ನನ್ನನ್ನು ಆ ಪಕ್ಷ ಸೂಕ್ತವಾಗಿ ಪರಿಗಣಿಸಿಲ್ಲ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ರಾಜ್ಯಘಟಕದ ಅಧ್ಯಕ್ಷರ ಆಯ್ಕೆ ತೀರ್ಮಾನ ಸರಿಯಾದವಲ್ಲ.
- ಸ್ಥಳೀಯ ಸಂಸ್ಥೆ ಚುನಾವಣೆ ನಂತರ ಈ ಸರಕಾರ ಉಳಿಯುವುದಿಲ್ಲ. ಸರಕಾರ ಬಿದ್ದು ಹೋಗುತ್ತದೆ. ಹೀಗಾಗಿ ನಾವು ಪರ್ಯಾಯ ಶಕ್ತಿಯಾಗಿ ರೂಪುಗೊಳ್ಳುವುದು ಅನಿವಾರ್ಯ. ಬಿಜೆಪಿಯಲ್ಲಿ ಗೌರವ ದಕ್ಕದಿದ್ದರೆ ಮುಂದಿನ ದಾರಿ ನೋಡಿಕೊಳ್ಳಬೇಕಾಗುತ್ತದೆ.
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]