ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಕರರಾಮನ್‌ ಕೊಲೆ ಪ್ರಮುಖ ಆರೋಪಿ ಅಪ್ಪು ಆಂಧ್ರದಲ್ಲಿ ಸೆರೆ

By Staff
|
Google Oneindia Kannada News

ಶಂಕರರಾಮನ್‌ ಕೊಲೆ ಪ್ರಮುಖ ಆರೋಪಿ ಅಪ್ಪು ಆಂಧ್ರದಲ್ಲಿ ಸೆರೆ
ಬಂಧಿತ ಅಪ್ಪುವಿನಿಂದ ಪ್ರಕರಣದಲ್ಲಿ ಶಂಕರಾಚಾರ್ಯರ ನೈಜ ಪಾತ್ರ ಬಹಿರಂಗ?

ಹೈದರಾಬಾದ್‌ : ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರು ಬಂಧನಕ್ಕೊಳಗಾಗಿರುವ ಶಂಕರರಾಮನ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೃಷ್ಣಸ್ವಾಮಿ ಅಲಿಯಾಸ್‌ ಅಪ್ಪುವನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಬಳಿಯ ಪುತ್ತೂರಿನಲ್ಲಿ ಡಿ.3ರ ಶುಕ್ರವಾರ ಅಪ್ಪುವನ್ನು ಬಂಧಿಸಲಾಯಿತು. ಹೆಚ್ಚಿನ ತನಿಖೆಗಾಗಿ ಆತನನ್ನು ಕಾಂಚೀಪುರಕ್ಕೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕರರಾಮನ್‌ ಕೊಲೆಯ ಸೂತ್ರಧಾರ ಎಂದು ಅಪ್ಪುವನ್ನು ಪೊಲೀಸರು ಶಂಕಿಸಿದ್ದಾರೆ. ಕಾಂಚೀಪುರಂನ ವರದರಾಜ ಪೆರುಮಾಳ್‌ ದೇಗುಲದ ಮೇನೇಜರ್‌ ಆಗಿದ್ದ ಶಂಕರರಾಮನ್‌ರ ಕೊಲೆ ಕಳೆದ ಸೆಪ್ಟಂಬರ್‌ನಲ್ಲಿ ನಡೆದಿತ್ತು .

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X