ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ಸಾಹಸ ; ಮರಳಿ ಅಪ್ಪಅಮ್ಮನ ಮಡಿಲು ಸೇರಿದಳು ಪವಿತ್ರ

By Staff
|
Google Oneindia Kannada News

ಪೊಲೀಸರ ಸಾಹಸ ; ಮರಳಿ ಅಪ್ಪಅಮ್ಮನ ಮಡಿಲು ಸೇರಿದಳು ಪವಿತ್ರ
ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ಬೆಂಗಳೂರು ಪೊಲೀಸ್‌ ಪಡೆ

ಬೆಂಗಳೂರು : ತ್ವರಿತ ತನಿಖೆಯನ್ನು ನಡೆಸುವ ಮೂಲಕ ಅಪಹರಣಕ್ಕೊಳಗಾಗಿದ್ದ ಉದ್ಯಮಿಯಾಬ್ಬರ ಮಗಳನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ.

ರಾಜಾಜಿನಗರದ ಉದ್ಯಮಿ ಅನಂತ್‌ ಎನ್ನುವವರ ಮಗಳು ಪವಿತ್ರಾ ಎನ್ನುವ ಐದು ವರ್ಷದ ಬಾಲಕಿ ನ.26ರಂದು ಅಪಹರಣಕ್ಕೊಳಗಾಗಿದ್ದಳು. ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿಗಳು ಅಪಹರಿಸಿ ಮೈಸೂರಿನ ವಸತಿಗೃಹವೊಂದರಲ್ಲಿ ಇರಿಸಿದ್ದರು. ಬಾಲಕಿಯ ತಂದೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ಅಪಹರಣಕಾರರು 10 ಲಕ್ಷ ರುಪಾಯಿ ಒತ್ತೆ ಹಣ ನೀಡುವಂತೆ, ಇಲ್ಲದಿದ್ದಲ್ಲಿ ಪವಿತ್ರಾಳ ಕೈಕಾಲು ಕತ್ತರಿಸುವುದಾಗಿ ಬೆದರಿಕೆ ಒಡ್ಡಿದ್ದರು.

ಅನಂತ್‌ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಬೆಂಗಳೂರು ಪೊಲೀಸರು ಅಪಹರಣಕಾರರಿಗಾಗಿ ರಾಜ್ಯದೆಲ್ಲಡೆ ಬಲೆ ಬೀಸಿದರು. ಪತ್ತೆ ಕಾರ್ಯದಲ್ಲಿ ಬೆಂಗಳೂರು ಪೊಲೀಸರೊಂದಿಗೆ ಮಂಡ್ಯ, ಮೈಸೂರು ಹಾಗೂ ಕೋಲಾರದ ಪೊಲೀಸರು ಸಹಕರಿಸಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎಸ್‌. ಮರಿಸ್ವಾಮಿ ತಿಳಿಸಿದ್ದಾರೆ.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ರಸ್ತೆ ಸಮೀಪದ ವಿದ್ಯಾರಣ್ಯನಗರದ ರಾಜು (23), ಬಿಹಾರದ ಪ್ರದೀಪ್‌ ತಿವಾರಿ (21) ಹಾಗೂ ವಿನೋದ್‌ಕುಮಾರ್‌ (23) ಎನ್ನುವ ಮೂವರನ್ನು ಬಂಧಿಸಲಾಗಿದೆ. ಎಕ್ಸ್‌ಮಾಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಆರೋಪಿಗಳು ಐಷಾರಾಮ ಬದುಕಿನ ಆಸೆಯಿಂದ ಈ ಅಪಹರಣ ನಡೆಸಿದ್ದರು.

ಆರೋಪಿಗಳಲ್ಲೊಬ್ಬನಾದ ರಾಜು ಟೀವಿ ರಿಪೇರಿಯ ನೆಪದಲ್ಲಿ ಅನಂತ್‌ ಅವರ ಮನೆಗೆ ಆಗಾಗ ಬರುತ್ತಿದ್ದ . ಆತ ಅನಂತ್‌ ಅವರ ದೂರದ ಸಂಬಂಧಿಯೂ ಹೌದು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X