ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಚಿ : ಮೃತ ಶಂಕರರಾಮನ್‌ ಕುಟುಂಬಕ್ಕೆ 5 ಲಕ್ಷ ರು. ನೆರವು -ಜಯಾ

By Staff
|
Google Oneindia Kannada News

ಕಂಚಿ : ಮೃತ ಶಂಕರರಾಮನ್‌ ಕುಟುಂಬಕ್ಕೆ 5 ಲಕ್ಷ ರು. ನೆರವು -ಜಯಾ
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಬಿಡುಗಡೆ

ಚೆನ್ನೈ : ಕಂಚಿಯ ವರದರಾಜ ಪೆರುಮಾಳ್‌ ದೇಗುಲದ ಮೇನೇಜರ್‌ ಶಂಕರರಾಮನ್‌ರ ಕುಟುಂಬಕ್ಕೆ 5 ಲಕ್ಷ ರುಪಾಯಿಗಳ ನೆರವನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸೋಮವಾರ ಪ್ರಕಟಿಸಿದ್ದಾರೆ.

ಶಂಕರರಾಮನ್‌ರ ವಿಧವೆ ಪದ್ಮಾ ಅವರು ಹಣಕಾಸಿನ ನೆರವು ಕೋರಿದ್ದರು. ತಮ್ಮ ಕುಟುಂಬ ಬಡತನ ಅನುಭವಿಸುತ್ತಿದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎನ್ನುವ ಪದ್ಮಾರ ಕೋರಿಕೆಯನ್ನು ಮನ್ನಿಸಿ ಐದು ಲಕ್ಷ ರುಪಾಯಿಗಳ ನೆರವು ನೀಡಲಾಗುವುದು. ಈ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ನ.22ರ ಸೋಮವಾರ ವಿಧಾನಸಭೆಯಲ್ಲಿ ಜಯಲಲಿತಾ ಪ್ರಕಟಿಸಿದರು.

ಕಳೆದ ಸೆ.3ರಂದು ಶಂಕರರಾಮನ್‌ ಕೊಲೆ ಕಂಚಿ ದೇಗುಲ ಸಮುಚ್ಛಯದ ಆವರಣದಲ್ಲಿ ನಡೆದಿತ್ತು . ಈ ಕೊಲೆಯಲ್ಲಿ ಕೈವಾಡವಿದೆ ಎನ್ನುವ ಆರೋಪದಲ್ಲಿ ಕಂಚಿ ಮಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರನ್ನು ಬಂಧಿಸಲಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X