ಡಯಾಬಿಟಿಸ್,ರಕ್ತದೊತ್ತಡ, ಹೈಟೆನ್ಷನ್ಗೆ ‘ಹಿಪ್ಪುನೇರಳೆ ಚಹಾ’ ಮದ್ದು
ಡಯಾಬಿಟಿಸ್,ರಕ್ತದೊತ್ತಡ, ಹೈಟೆನ್ಷನ್ಗೆ ‘ಹಿಪ್ಪುನೇರಳೆ ಚಹಾ’ ಮದ್ದು
ಹಿಪ್ಪುನೇರಳೆಯ ‘ಸ್ಫೂರ್ತಿ’ ಆರೋಗ್ಯದಾಯಕ ಪಾನೀಯ ಮಾರುಕಟ್ಟೆಗೆ
ಹಿಪ್ಪುನೇರಳೆ ಎಲೆಗಳನ್ನು ಬಳಕೆ ಮಾಡಿರುವ ಸ್ಫೂರ್ತಿ ಎನ್ನುವ ಹೊಸ ಆರೋಗ್ಯ ಪಾನೀಯವನ್ನು ಕೇಂದ್ರ ರೇಷ್ಮೆ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿತು. ಮೈಸೂರು ಮೂಲದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಕೇಂದ್ರ ಈ ಪಾನೀಯವನ್ನು ಸಿದ್ಧಪಡಿಸಿದೆ.
ಹಿಪ್ಪು ನೇರಳೆ ರೇಷ್ಮೆ ಉದ್ಯಮಕ್ಕೆ ಮಾತ್ರವಲ್ಲದೇ, ತನ್ನ ಔಷಧೀಯ ಗುಣಗಳಿಂದ ರೈತನಿಗೆ ಸಹಕಾರಿಯಾಗಿದೆ. ರೈತರು ಆದಾಯ ತರುವ ಹಿಪ್ಪು ನೇರಳೆ ಕೃಷಿಯತ್ತ ಗಮನಹರಿಸಲು ಇದು ಪರ್ವಕಾಲ. ಹಿಪ್ಪು ನೇರಳೆ ಬಗೆಗೆ ಮತ್ತಷ್ಟು ಅಧ್ಯಯನಗಳು ನಡೆಯುತ್ತಿವೆ.
ಈ ಪಾನೀಯ ಜೀರ್ಣಕ್ರಿಯೆ ವೃದ್ಧಿಗೆ, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಡಯಾಬಿಟೀಸ್, ರಕ್ತದೊತ್ತಡ, ಹೈಟೆನ್ಷನ್ಗೆ ರಾಮಬಾಣ ಎಂದು ಅಧ್ಯಯನಗಳು ತಿಳಿಸಿವೆ. ಜಪಾನ್, ಚೈನಾ, ಥೈಲಾಂಡ್ ಮತ್ತು ಸೌತ್ ಕೊರಿಯಾದಲ್ಲಿ ಈ ಪಾನೀಯಗಳು ಬಳಕೆಯಲ್ಲಿದೆ. ಹಿಪ್ಪು ನೇರಳೆಯಿಂದ ಚಾಕಲೇಟ್, ಬಿಸ್ಕತ್ ಸೇರಿದಂತೆ 93 ಬಗೆಯ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ತಯಾರಿಸಬಹುದಾಗಿದೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications