ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳವಳಿ ಹಾಗೂ ಸಾಫ್ಟ್‌ವೇರ್‌ : ಅಂತರ್ಜಾಲದಿ ಕರ್ನಾಟಕ ರಕ್ಷಣಾ ವೇದಿಕೆ

By Staff
|
Google Oneindia Kannada News

ಚಳವಳಿ ಹಾಗೂ ಸಾಫ್ಟ್‌ವೇರ್‌ : ಅಂತರ್ಜಾಲದಿ ಕರ್ನಾಟಕ ರಕ್ಷಣಾ ವೇದಿಕೆ
ಯಾರಿಗೆ ಕನ್ನಡ ಬೇಡವೋ ಅವರು ಕನ್ನಡಿಗರಿಗೆ ಬೇಡ-ಚಂಪಾ

  • ವರದಿ : ಪ್ರವೀಣ್‌ ಬಿ.ಎಸ್‌.
ಬೆಂಗಳೂರು : ಯಾರಿಗೆ ಕನ್ನಡ ಬೇಡವೋ ಅವರು ಕನ್ನಡಿಗರಿಗೆ ಬೇಡ. ಕನ್ನಡ ಕಲಿಯದ ಪರಭಾಷಾ ವಲಸಿಗರು ನಮಗೆ ಬೇಡ. ಅವರು ಇಲ್ಲಿ ಇರಬೇಕಾದರೆ ಈ ನೆಲದ ಭಾಷೆಯನ್ನು-ಸಂಸ್ಕೃತಿಯನ್ನು ಗೌರವಿಸಬೇಕು. ಆಡ ಳಿತದಲ್ಲಿ ಕನ್ನಡವನ್ನು ಅನುಷ್ಠಾನಕ್ಕೆ ತರದ ಅಧಿಕಾರಿಗಳನ್ನು ಸರ್ಕಾರ ಶಿಕ್ಷಿಸದಿದ್ದರೆ ಕನ್ನಡಿಗರೇ ಆ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್‌ಪಾಟೀಲ್‌ ಗುಡುಗಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ನಡೆದ (ನ. 7) ಕರ್ನಾಟಕ ರಕ್ಷಣಾ ವೇದಿಕೆಯ ಅಂತರ್ಜಾಲ ತಾಣದ ಉದ್ಘಾಟನಾ ಸಮಾರಂಭದಲ್ಲಿ ಚಂಪಾ ಮಾತನಾಡುತ್ತಿದ್ದರು.

Kannada Rakshana Vedike Website inaugural functionಕಾರ್ಯಕ್ರಮ ಉದ್ಘಾಟಿಸಿದ ಕನ್ನಡದ ಹಿರಿಯ ಸಾಹಿತಿ ಎಲ್‌. ಎಸ್‌. ಶೇಷಗಿರಿರಾವ್‌ ಮಾತನಾಡುತ್ತ, ಕನ್ನಡಿಗರು ಸ್ವಾಭಿಮಾನಿಗಳಾಗಿ ನಾಡು-ನುಡಿ ಉಳಿಸಲು ಹೋರಾಡಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಾಧನೆ ಮಹತ್ವವನ್ನು ಪಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಸ್ಟರ್‌ ಹಿರಣ್ಣಯ್ಯ, ಹಿಂದೆ ನಾವು ಕಲ್ಲು ಹೊಡೆಯುವ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಒಳ್ಳೆಯ ಮಾತಿಗೆ ಬಗ್ಗದ ಪರಭಾಷಾ ದುರಭಿಮಾನಿಗಳಿಗೆ ದಂಡನೆಯೇ ಸರಿಯಾದ ಮಾರ್ಗ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಗಾಂಧಿವಾದಿ ಜಿ. ನಾರಾಯಣ, ಕನ್ನಡದ ಕೆಲಸ ಮಾಡಲು ನಮ್ಮ ರಾಜಕೀಯ ನಾಯಕರು ಅಸಮರ್ಥರಾಗಿದ್ದಾರೆ. ಪರಭಾಷಿಕರ ವಲಸೆಯೇ ಕನ್ನಡಿಗರ ಸಮಸ್ಯೆಗೆ ಮೂಲ. ಈ ಅನಾರೋಗ್ಯಕರ ವಲಸೆಯನ್ನು ತಡೆಯಲು ರಾಷ್ಟ್ರೀಯ ಮಟ್ಟದಲ್ಲಿ ಶಾಸನ ರೂಪಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

Kannada Rakshana Vedike Website inaugural functionಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌ ಮಾತನಾಡಿ, ಕನ್ನಡಿಗರಿಗೆ ಕನ್ನಡದಲ್ಲಿ ಕಲಿತರೆ ಒಳ್ಳೆಯ ಉದ್ಯೋಗ ದೊರೆಯುವಂತಾಗಲು, ಸರೋಜಿನಿ ಮಹಿಷಿ ವರದಿ ಅತ್ಯಗತ್ಯ. ಅದರ ಜಾರಿಗೆ ಹೋರಾಟವನ್ನು ಮಾಡಲು ವೇದಿಕೆಗೆ ಸಲಹೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷರಾದ ಟಿ.ಎ. ನಾರಾಯಣ ಗೌಡ ಗಣಕ ಯಂತ್ರದ ಮೌಸ್‌ ಒತ್ತುವ ಮೂಲಕ ಕನ್ನಡ ಪರ ಹೋರಾಟಗಾರರ ಪ್ರಪ್ರಥಮ ಅಂತರ್ಜಾಲ ತಾಣವನ್ನು ಕನ್ನಡ ಕುಲಕೋಟಿಗೆ ಸಮರ್ಪಿಸಿ ಮಾತನಾಡುತ್ತ - ಕನ್ನಡದ ಹೋರಾಟಕ್ಕೆ ಮೊದಲ ಬಾರಿಗೆ ಸಾಫ್ಟ್‌ವೇರ್‌ ಉದ್ಯಮದಲ್ಲಿರುವ ಕನ್ನಡಿಗರ ಬೆಂಬಲ ಸಿಕ್ಕಿದೆ. ಇದರಿಂದ ಕನ್ನಡ ಚಳುವಳಿಗೆ ಹೊಸ ಆಯಾಮ ದೊರೆತಂತಾಗಿದೆ ಎಂದರು.

ಕನ್ನಡ ಚಿತ್ರರಂಗದ ಉಳಿವಿಗಾಗಿ ಹೋರಾಟ ಮಾಡಿ ಸೆರೆವಾಸ ಅನುಭವಿಸಿದ ನಮ್ಮ ಕಾರ್ಯಕರ್ತರ ಕ್ಷೇಮವನ್ನು ವಿಚಾರಿಸುವ ಸೌಜನ್ಯವನ್ನೂ ಚಿತ್ರರಂಗದ ಮಂದಿ ತೋರಿಸಲಿಲ್ಲ. ಅವರ ನಿಜವಾದ ಬಣ್ಣ ಈಗ ಬಯಲಾಗಿದೆ ಎಂದು ನಾರಾಯಣ ಗೌಡರು ವಿಷಾದ ವ್ಯಕ್ತಪಡಿಸಿದರು.

Kannada Rakshana Vedike Website inaugural functionಬನವಾಸಿ ಬಳಗದ ಮಹೇಶ್‌ ಪ್ರಾಸ್ತಾವಿಕ ಭಾಷಣದಲ್ಲಿ - ಕರ್ನಾಟಕ ರಕ್ಷಣಾ ವೇದಿಕೆಯ ಅಂತರ್ಜಾಲ ತಾಣದ ಪ್ರಸ್ತುತತೆಯನ್ನು ಹಾಗೂ ಅವಶ್ಯಕತೆಯನ್ನು ವಿವರಿಸಿದರು. ಅಂತರ್ಜಾಲ ತಾಣವನ್ನು ಅಭಿವೃದ್ಧಿಗೊಳಿಸಿದ ಬನವಾಸಿ ಬಳಗದ ಗುರುಪ್ರಸಾದ್‌ ಅಂತರ್ಜಾಲ ತಾಣವನ್ನು ಪರಿಚಯಿಸಿದರು. ವೇದಿಕೆಯ ಪ್ರಮುಖ ಸಾಧನೆಗಳನ್ನು ಹಾಗೂ ಹೋರಾಟಗಳನ್ನು ಬನವಾಸಿ ಬಳಗದ ಪ್ರವೀಣ್‌ ವಿವರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ವಿನುತ ಮತ್ತು ವಿಭಾ ಪ್ರಾರ್ಥಿಸಿ, ಕನ್ನಡ ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬನವಾಸಿ ಬಳಗದ ರಾಘವೇಂದ್ರ ಸ್ವಾಗತಿಸಿ, ಜನಾರ್ಧನ ನಿರೂಪಿಸಿದರು. ಶಾಂತರಾಮ್‌ ವಂದಿಸಿದರು.

ವೇದಿಕೆಯ ಜಾಲತಾಣ : www.karnatakarakshanavedike.org.

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X