ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ಕಾಂಗ್ರೆಸ್‌ ಕಾರ್ಪೊರೇಟರ್‌ ಚಂದ್ರಪ್ಪ ದಾರುಣ ಕೊಲೆ

By Staff
|
Google Oneindia Kannada News

ಬೆಂಗಳೂರು : ಕಾಂಗ್ರೆಸ್‌ ಕಾರ್ಪೊರೇಟರ್‌ ಚಂದ್ರಪ್ಪ ದಾರುಣ ಕೊಲೆ
ದೀಪಾವಳಿ ಮುನ್ನಾದಿನ ಬೆಂಗಳೂರಲ್ಲಿ ಚೆಲ್ಲಿದ ರಕ್ತ

ಬೆಂಗಳೂರು : ಬೆಕ್ಕಿನಕಣ್ಣು ರಾಜೇಂದ್ರನ ಕೊಲೆ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಕೊಲೆಗೆ ಬೆಂಗಳೂರು ಮಹಾನಗರ ಸಾಕ್ಷಿಯಾಗಿದ್ದು , ನ.10ರ ಬುಧವಾರ ನಗರದ ಮಹದೇವಪುರ ಕಾರ್ಪೊರೇಟರ್‌ ಚಂದ್ರಪ್ಪ ಕೊಲೆಗೀಡಾಗಿದ್ದಾರೆ.

ಗುರುತು ಸಿಗದ ಮೂವರು ಹಂತಕರು ಚಂದ್ರಪ್ಪನವರನ್ನು ಬುಧವಾರ ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂದ್ರಪ್ಪನವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಅವರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದರು.

ಕೊಲೆಯ ಕಾರಣ ತಿಳಿದುಬಂದಿಲ್ಲ . ಚಂದ್ರಪ್ಪನವರು ತಮ್ಮ ಮಗುವನ್ನು ಶಾಲೆಗೆ ಬಿಟ್ಟು ಬರುವಾಗ ಕೊಲೆಗೀಡಾಗಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X